ಬೆಂಗಳೂರು: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂದೆ ಇಂದು ಆಯೋಜಿಸಿದ್ದ ಮ್ಯಾರಥಾನ್ ಅನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಉದ್ಘಾಟಿಸಿದರು.
ಇನ್ನೂ ಈ ವೇಳೆ ಡಿಸಿಎಂ ಡಿಕೆಶಿ ವಿಧಾನಸೌಧದ ಆವರಣದ ಸುತ್ತ ಸೈಕಲ್ ನಲ್ಲೇ ರೌಂಡ್ಸ್ ಹಾಕಿದ್ದಾರೆ. ಕೆಂಗಲ್ ಗೇಟ್ ಬಳಿ ಬರುವಾಗ ನಿಯಂತ್ರಣ ತಪ್ಪಿ ಡಿಕೆಶಿ ಕೆಳಗೆ ಬಿದ್ದಿರುವ ಘಟನೆ ಕೂಡ ನಡೆದಿದೆ.
ಸೈಕಲ್ ಹೊಡೆಯುತ್ತಾ ಬರ್ತಿದ್ದ ಡಿಸಿಎಂಗೆ ನಿಯಂತ್ರಣ ತಪ್ಪಿ ಆಗಿ ವಿಧಾನಸೌಧದ ಮೆಟ್ಟಲುಗಳ ಮೇಲೆಯೇ ಜಾರಿ ಬಿದ್ದಿದ್ದಾರೆ. ಪಕ್ಕದಲ್ಲೇ ಇದ್ದ ಬೆಂಬಲಿಗರು ಅವರ ಸಹಾಯಕ್ಕೆ ಬಂದು ಮೇಲಕ್ಕೆ ಎತ್ತಿದ್ದಾರೆ. ಸದ್ಯ ಸೈಕಲ್ ನಿಲ್ಲಿಸುವ ವೇಳೆಯಲ್ಲಿ ಬ್ಯಾಲೆನ್ಸ್ ತಪ್ಪಿ ಬಿದ್ದ ಡಿಕೆಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.