ಕನ್ನಡತಿ ಸೀರಿಯಲ್ ಖ್ಯಾತಿಯ ಕಿರಣ್ ರಾಜ್ ಹಾಗೂ ಬಿಗ್ ಖ್ಯಾತಿಯ ಭವ್ಯಾ ಗೌಡ, ನಮ್ರತಾ ಗೌಡ ಅಭಿನಯದ ಕರ್ಣ ಸೀರಿಯಲ್ ತಂಡ ಪ್ರೇಕ್ಷಕರಿಗೆ ಶಾಕ್ ಕೊಟ್ಟಿದೆ. ನಿನ್ನೆ ಪ್ರಸಾರವಾಗಬೇಕಿದ್ದ ಧಾರಾವಾಹಿ ಅನಿರ್ದಿಷ್ಟಾವಧಿ ಮುಂದೂಡಲಾಗಿದೆ. ಅದಕ್ಕೆ ಕಾರಣ ಧಾರಾವಾಹಿ ಪಾತ್ರಧಾರಿ ಭವ್ಯಾ ಗೌಡ.
ಶ್ರುತಿ ನಾಯ್ಡು ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಕರ್ಣ ಸೀರಿಯಲ್ ನಲ್ಲಿ ಕಿರಣ್ ರಾಜ್ಗೆ ನಾಯಕಿಯರಾಗಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಅಭಿನಯಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಪ್ರೋಮೋಗಳಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ನಿನ್ನೆ ತೆರೆಕಾಣಬೇಕಿದ್ದ ಧಾರಾವಾಹಿ ಮೂಂದೂಡಲು ಕಾರಣ ಭವ್ಯಾ.
ಭವ್ಯಾ ಗೌಡ ಕರ್ಣ ಸೀರಿಯಲ್ಗೂ ಮುನ್ನ ಬಿಗ್ ಬಾಸ್ ಸ್ಪರ್ಧಿಯಾಗಿದ್ದರು. ಕೊನೆವರೆಗೂ ಬಿಗ್ ಮನೆಯಲ್ಲಿದ್ದ ಭವ್ಯಾ ಆ ಬಳಿಕ ಬಾಯ್ಸ್ ವರ್ಸಸ್ ಗಲ್ಸ್೯ ಎಂಬ ಕಾರ್ಯಕ್ರಮದಲ್ಲಿ ಭಾಗವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಆಗಲಿಲ್ಲ. ಇನ್ನೂ ಸಾಮಾನ್ಯವಾಗಿ ಒಂದು ವಾಹಿನಿ ಜೊತೆ ಗುರುತಿಸಿಕೊಂಡವರು ಕೆಲ ಒಪ್ಪಂದಗಳನ್ನು ಮಾಡಿಕೊಂಡಿರುತ್ತಾರೆ. ಆ ಒಪ್ಪಂದ ಪೂರ್ಣಗೊಳ್ಳುವರೆಗೆ ಬೇರೆ ವಾಹಿನಿ ಕಡೆ ಇವರು ಮುಖ ಹಾಕುವಂತೆ ಇಲ್ಲ.
ಈ ಒಪ್ಪಂದವನ್ನು ಭವ್ಯಾ ಗೌಡ ಮುರಿದಿದ್ದಾರೆ ಎನ್ನುವುದು ಸದ್ಯಕ್ಕೆ ಕೇಳಿ ಬರುತ್ತಿರುವ ಮಾತು. ಈ ಹಿನ್ನೆಲೆ ಆ ವಾಹಿನಿಯವರು ಕರ್ಣನ ವಿರುದ್ದ ತಡೆಯಾಜ್ಞೆ ತಂದಿದ್ದಾರೆ ಹೀಗಾಗಿಯೇ ಕರ್ಣನ ಮೊದಲ ದಿನದ ಆಟಕ್ಕೆ ಬ್ರೇಕ್ ಹಾಕಲಾಗಿದೆ ಎನ್ನುವ ಸುದ್ದಿ ಸದ್ಯ ಕೇಳಿ ಬರುತ್ತಿದೆ.
ಕ್ಷಮೆ ಕೇಳಿದ ಕಿರಣ್ ರಾಜ್?
ನಾನು ಇವತ್ತು ಕರ್ಣನಾಗಿ ನಿಮ್ಮ ಮನೆಗೆ ಬರಬೇಕಿತ್ತು. ಆದರೆ ಕೆಲ ಕಾರಣಗಳಿಂದ ಅದು ಆಗಲಿಲ್ಲ. ಹೀಗಾಗಿ ಎಲ್ಲ ವೀಕ್ಷಕರ ಬಳಿ ಕ್ಷಮೆ ಕೇಳುತ್ತಿದ್ದೇನೆ. ನೀವು ಕೊಟ್ಟ ರೆಸ್ಪಾನ್ಸ್, ಪ್ರೀತಿಯಿಂದ ಒಳ್ಳೆಯ, ಉತ್ತಮವಾದ ಪ್ರಾಜೆಕ್ಟ್ ಅನ್ನು ಪ್ರೆಸೆಂಟ್ ಮಾಡಬೇಕು ಎಂದು ಕುತೂಹಲ ನಮ್ಮಲ್ಲಿ ಇತ್ತು. ಮೊದಲ ಎಪಿಸೋಡ್ ಯಾವಾಗ ಲಾಂಚ್ ಆಗುತ್ತೆ. ವೀಕ್ಷಕರ ರೆಸ್ಪಾನ್ಸ್ ಹೇಗಿರುತ್ತೆ ಎಂದು ಕಾಯುತ್ತಿದ್ದೇವು. ಇವತ್ತು ಶುರುವಾಗುತ್ತೆ ಎಂಬ ನಿರೀಕ್ಷೆಯಲ್ಲಿದ್ದೇ, ಎರಡು ವರ್ಷಗಳ ನಂತರ ಬರುತ್ತಿರುವ ಬಗ್ಗೆ ಕಾತುರತೆ ಇತ್ತು. ಕರ್ಣನಾಗಿ ನಾನು ಮನೆಗೆ ಬರಲು ತುಂಬಾ ಕುತೂಹಲದಿಂದ ಇದ್ದೇ. ನನಗೆ ಗೊತ್ತಿರುವ ಪ್ರಕಾರ ಕಾನೂನು ಸಮಸ್ಯೆ ಏನೋ ಆಗಿದೆ. ಆದಷ್ಟು ಬೇಗ ನಾವು ನಿಮ್ಮ ಮುಂದೆ ಬರುತ್ತೇವೆ. ತಡ ಆಗಬಹುದು. ಆದರೆ ಖಂಡಿತವಾಗಿ ಬಂದೇ ಬರುತ್ತೇವೆ. ಧಾರಾವಾಹಿ ಲಾಂಚ್ ಆಗದಿದ್ದಕ್ಕೆ ಕ್ಷಮೆ ಇರಲಿ. ಇದಕ್ಕಾಗಿ ನಿಮ್ಮ ಬಳಿ ಇನ್ನು ಸ್ವಲ್ಪ ಸಮಯ ಕೇಳುತ್ತಿದ್ದೇನೆ. ಈ ರೀತಿ ಆಗಬಾರದಿತ್ತು. ಪ್ರತಿಯೊಂದು ನಮ್ಮ ಕೈಯಲ್ಲಿ ಇರಲ್ಲ. ಕರ್ಣ ಧಾರಾವಾಹಿಗೆ ಕೋಟ್ಯಂತರ ರೂಪಾಯಿ ನಿರ್ಮಾಪಕರು ಹಾಕಿದ್ದಾರೆ. ಕಲಾವಿದರು, ಟೆಕ್ನಿಷಿಯನ್ಸ್ ಸಾಕಷ್ಟು ಶ್ರಮ ಹಾಕಿದ್ದಾರೆ. ಈ ಎಲ್ಲರ ಶ್ರಮಕ್ಕೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಕಿರಣ್ ರಾಜ್ ಭರವಸೆ ವ್ಯಕ್ತಪಡಿಸಿದ್ದಾರೆ.