ಬೆಂಗಳೂರು: ಕಾಲ್ತುಳಿತ ಘಟನೆಗೆ ಜವಾಬ್ದಾರಿಯನ್ನು ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಬೇಕು ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಹ್ಮದಾಬಾದ್ ನಲ್ಲಿ ನಡೆದ ವಿಮಾನ ಮತ್ತು ಬೆಂಗಳೂರಲ್ಲಿ ನಡೆದ ಕಾಲ್ತುಳಿತ ಪ್ರಕರಣಗಳನ್ನು ಸಮೀಕರಿಸಲಾಗಲ್ಲ,
Smartphone Explosion: ಈ ತಪ್ಪುಗಳನ್ನು ಎಂದಿಗೂ ಮಾಡ್ಬೇಡಿ: ಮೊಬೈಲ್ ಬ್ಲಾಸ್ಟ್ ಆಗತ್ತೆ!
ವಿಮಾನ ದುರಂತ ಒಂದು ದುರ್ಘಟನೆ, ಅದನ್ನು ಯಾರೂ ಪ್ರಾಯೋಜಿಸಲ್ಲ, ಎರಡರ ನಡುವೆ ಥಳುಕು ಹಾಕಿ ಸಿಎಂ ಸಿದ್ದರಾಮಯ್ಯ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಬೇಡ, ರಾಜ್ಯದಲ್ಲಿ ನಡೆಯುವ ಅಪಘಾತಗಳಿಗೆ ಸಿದ್ದರಾಮಯ್ಯ ಕಾರಣಾ ಅಂತ ಬಿಜೆಪಿ ಯಾವತ್ತೂ ಹೇಳಿಲ್ಲ ಎಂದು ಹೇಳಿದರು.
ಮಹಾರಾಷ್ಟ್ರದ ಪುಣೆಯಲ್ಲಿ ಕುಸಿದ ಸೇತುವೆ 35ವರ್ಷಗಳ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಿರ್ಮಾಣವಾಗಿತ್ತು, ಅದನ್ನು ಕೆದಕಿದರೆ ಕಾಂಗ್ರೆಸ್ ತಲೆಗೆ ಸುತ್ತಿಕೊಳ್ಳುತ್ತದೆ ಎಂದು ಹೇಳಿದರು.