ಕೋಲಾರ: ನಮಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೈಕಮಾಂಡ್ ಅಂತ ಯಾರು ಹೇಳಿದ್ದು. ಪ್ರಜಾಪ್ರಭುತ್ವದಲ್ಲಿ ನಮಗೆ ಹೈಕಮಾಂಡ್ ನಮ್ಮ ಪಕ್ಷದ ಅಧ್ಯಕ್ಷರಾದ ಡಿಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನಮ್ಮ ಹೈಕಮಾಂಡ್ ಕೋಲಾರ ಜಿಲ್ಲೆಯಲ್ಲಿ ನಮಗೆ ಯಾರು ಹೈಕಮಾಂಡ್ ಇಲ್ಲ ಎಂದು ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವ್ರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ. ಮಾತನಾಡಿದ ಅವ್ರು, ರಾಜ್ಯದಿಂದ ಹೈಕಮಾಂಡ್ ಏನು ಆದೇಶ ನೀಡುತ್ತೆ ಅದನ್ನು ಪಾಲನೆ ಮಾಡುತ್ತೆವೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ತಂದೆ ಸ್ಥಾನದಲ್ಲಿ ಇಟ್ಟು ಗೌರವಿಸುತ್ತೆವೆ, ಪೂಜಿಸುತ್ತೆವೆ, ಸ್ವಾಮಿಗಳು ಅಂತ ಹೇಳಿ ಪಾದಕ್ಕೆ ನಮಸ್ಕಾರ ಹಾಕುತ್ತೆವೆ ಎಂದು ಹೇಳಿದರು.
ಒಂದು ವೇಳೆ ಜಿಲ್ಲೆಯಲ್ಲಿ ಅವರು ಹೈಕಮಾಂಡ್ ಆದರೆ ಜಿಲ್ಲೆಯ ಎಲ್ಲಾ ಶಾಸಕರನ್ನು ಒಟ್ಟಿಗೆ ಸೇರಿಸಿ ಹೈಕಮಾಂಡ್ ಜೊತೆ ಮಾತನಾಡಬಹುದಿತ್ತು ಆದರೆ ಅವರು ಆ ಕೆಲಸವನ್ನು ಮಾಡಲಿಲ್ಲ ಎಂದು ಹೇಳಿದರು.