ಹಾಸನ:- ಬೆಳ್ಳಂ ಬೆಳಗ್ಗೆ ಗ್ರಾಮಕ್ಕೆ ಕಾಡಾನೆಗಳು ಎಂಟ್ರಿ ಕೊಟ್ಟಿದ್ದು, ಮುಖ್ಯರಸ್ತೆಯಲ್ಲಿ ರಾಜಗಾಂಭೀರ್ಯ ನಡಿಗೆಯಲ್ಲಿ ಸಾಗಿದ ದೃಶ್ಯ ಕಂಡು ಬಂದಿದೆ.
ಬೆಳ್ಳಂಬೆಳಗ್ಗೆ ಕಾಡಾನೆ ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಈ ಘಟನೆ ಸಕಲೇಶಪುರ ತಾಲೂಕು ಕಿರುಹುಣಸೆಯಲ್ಲಿ ಜರುಗಿದೆ. ಎರಡು ದೈತ್ಯಾಕಾರದ ಆನೆಗಳು ಮುಖ್ಯ ರಸ್ತೆಯಲ್ಲೇ ಸಂಚರಿಸಿ ಆತಂಕ ಸೃಷ್ಟಿ ಮಾಡಿವೆ. ಕಿರುಹುಣಸೆ ಫಾರೆಸ್ಟ್ ನಲ್ಲಿ ಎರಡು ಆನೆಗಳು ಬೀಡು ಬಿಟ್ಟಿದೆ.
ಸ್ವಲ್ಪ ದೂರ ರಸ್ತೆಯಲ್ಲೇ ಸಾಗಿ ನಂತರ ಅರಣ್ಯ ದೊಳಗೆ ಎಂಟ್ರಿ ಕೊಟ್ಟಿದೆ. ಆನೆಗಳು ಸಂಚರಿಸುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ವಡೂರು ಹಾಗೂ ಕಿರುಹುಣಸೆ ಗ್ರಾಮದಲ್ಲಿ 15 ದಿನಗಳಿಂದ ಮೂರು ಕಾಡಾನೆಗಳು ಬೀಡು ಬಿಟ್ಟಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.