ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬರುವ ಪ್ರವಾಸಿಗರ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ನಗರದ ಹೃದಯ ಭಾಗದಲ್ಲಿ ಇರುವ ಲಕ್ಷ್ಮಿ ಮಾಲ್ ನಲ್ಲಿ ಅತ್ಯಾಧುನಿಕ ಸೌಲಭ್ಯಗಳಿಂದ ಸುಸಜ್ಜಿತ 46 ರೂಂ ಗಳನ್ನೂ ಹೊಂದಿರುವ ” ಹೋಟೆಲ್ ಆಶ್ರಯ ಇನ್” ಗ್ರಾಹಕರ ಸೇವೆಗೆ ಸಜ್ಜಾಗಿದೆ.
ಹಳೆಯ ಬಟ್ಟೆ ಎಸೆಯೋದು ಅಥವಾ ದಾನ ಮಾಡೋದು.. ಇದರಲ್ಲಿ ಯಾವುದು ಒಳ್ಳೆಯದು?
ಆಧುನಿಕ, ಸೊಗಸಾದ, ಸುಸಜ್ಜಿತವಾದ 300 ಚದರ ಅಡಿ ಕೊಠಡಿಗಳು ಕೆಲಸಕ್ಕಾಗಿ ಅಥವಾ ವಿರಾಮಕ್ಕಾಗಿ ವಿಶ್ರಾಂತಿ ಪಡೆಯಲು ಸೂಕ್ತವಾದ ಸ್ಥಳವನ್ನು ಒದಗಿಸುತ್ತವೆ. ಅದೇ ರೀತಿ ಹೆಚ್ಚುವರಿ ಸ್ಥಳಾವಕಾಶ ಮತ್ತು ಐಷಾರಾಮಿ ವಾಸ್ತವ್ಯವನ್ನು ಬಯಸುವವರಿಗಾಗಿ ವಿನ್ಯಾಸಗೊಳಿಸಲಾದ 600 ಚದರ ಅಡಿ ವಿಸ್ತೀರ್ಣದ ಸೂಟ್ಗಳು ಪ್ರತ್ಯೇಕವಾದ ವಾಸ ಮತ್ತು ಊಟದ ಪ್ರದೇಶವನ್ನು ಹೊಂದಿ ಮತ್ತು ಐಷಾರಾಮಿ ವಾಸ್ತವ್ಯಕ್ಕಾಗಿ ನಿರ್ದಿಷ್ಟ ವಾತಾವರಣವನ್ನು ಹೊಂದಿವೆ.
ಗ್ರಾಹಕ ಸ್ನೇಹಿಯಾಗಿ ವಿನ್ಯಾಸಗೊಳಿಸಲಾದ ಹೋಟೆಲ್ “ಆಶ್ರಯ ಇನ್” ನಲ್ಲಿನ ಕೊಠಡಿಗಳು ಮತ್ತು ಸೂಟ್ಗಳಲ್ಲಿ ಆಧುನಿಕ ಐಷಾರಾಮಿ ಮತ್ತು ಮನೆಯಂತಹ ಸೌಕರ್ಯದ ಪರಿಪೂರ್ಣ ಮಿಶ್ರಣವನ್ನು ಅನುಭವಿಸ ಬಹುದಾಗಿದೆ. ಗ್ರಾಹಕರ ವಾಹನಗಳಿಗಾಗಿಯೇ ಎರಡು ಮಹಡಿಗಳ ವಿಶಾಲ ಪಾರ್ಕಿಂಗ ವ್ಯವಸ್ಥೆಯನ್ನು “ಹೊಟೇಲ್ ಆಶ್ರಯ ಇನ್” ಹೊಂದಿದೆ.
ಸ್ವಾದಿಷ್ಟ ಮತ್ತು ರುಚಿಕರ ಭೋಜನದ ಅನುಭವವನ್ನು ಅನುಭವಿಸಲು ನುರಿತ ಬಾಣಸಿಗರಿಂದ ತಯಾರಿಸಲಾಗುವ ಆಯ್ದ ಸ್ಥಳೀಯ ಮತ್ತು ಜಾಗತಿಕ ರುಚಿಗಳು, ಕ್ಯುರೇಟೆಡ್ ವಿಶೇಷ ಭಕ್ಷ್ಯಗಳು ಮತ್ತು ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳಿಗೆ ಪ್ರತ್ಯೇಕ ಅಡುಗೆ ಮನೆಗಳೊಂದಿಗೆ ಗ್ರಾಹಕರ ಮನ ತಣಿಸಲು ಅತ್ಯಾಧುನಿಕ ವಾತಾವರಣದೊಂದಿಗೆ “ಫೈನ್ ಡೈನ್ ಮತ್ತು ಬಾರ” ಸಿದ್ಧವಾಗಿದೆ.
ಮೇಲ್ಮಳಿಗೆಯಲ್ಲಿ ಹಗಲು ಹಾಗೂ ರಾತ್ರಿ ಎರಡು ಸಮಯದಲ್ಲಿನಗರದ ವಿಹಂಗಮ ನೋಟವನ್ನು ಅನುಭವಿಸುತ್ತ ” ಲಖನೌವೀ ಗೆಹಲೋಟಿ ಕಬಾಬ್” ” ಮಟನ್ ಯಾಕ್ನಿ ಶೋರ್ಬಾ”, “ಚಿಕನ್ ದಂ ಬಿರಿಯಾನಿ” ” ಮಟನ್ ದಂ ಬಿರಿಯಾನಿ ” ” ಸ್ಮೋಕ್ ವೆಜ್ ಸಲಾಡ್ ” ” ಚೀಜಿ ಕರ್ರಮ್ ಕುರ್ರೆ ” ಮುಂತಾದ ವೈವಿಧ್ಯಮಯಆಹಾರ ಮತ್ತು ಪಾನೀಯಗಳನ್ನು ಸರ್ವ ಋತುಗಳಲ್ಲಿ ಸವಿಯಲು ವಿನೂತನವಾಗಿ ನಿರ್ಮಿಸಿರುವ ವಿಶಾಲವಾದ “ಸ್ಕೈ ಲೌಂಜ್” ಬಾರ ಕೌಂಟರನಲ್ಲಿ ವೈವಿಧ್ಯಮಯ ಕಾಕ್ಟೇಲ್ಗಳು ಮತ್ತು ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ರೂಪಿಸಲಾದ ಮೆನು ಅನುಭವಿಸ ಬಹುದಾಗಿದೆ.
ಅಲ್ಲದೆ ಜೀವನದ ಅವಿಸ್ಮರಣೀಯ ಕ್ಷಣಗಳನ್ನು ಬಂಧು ಬಳಗದವರಿಗೆ ಅನುಭವಿಸುವ ನಿಟ್ಟಿನಲ್ಲಿ ಅತಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಸಮಾರಂಭಗಳನ್ನು ಆಯೋಜಿಸಲು ಮೂರೂ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಹವಾನಿಯಂತ್ರಿತ ಬ್ಯಾಂಕ್ವೆಟ್ ಹಾಲ್ ಗಳು ಲಭ್ಯವಿವೆ.
” ಔರಾ” ಮತ್ತು ” ಅಮ್ರೀತ “
ಔರಾ ಮತ್ತು ಅಮ್ರೀತ ಅವಳಿ ಸಭಾಂಗಣಗಳಾಗಿದ್ದು, ಪ್ರತಿಯೊಂದೂ ಸಭಾಂಗಣ 250-350 ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ. ಮನಸೆಳೆಯುವ ಒಳಾಂಗಣ ಅಲಂಕಾರಗಳೊಂದಿಗೆ ವಿನ್ಯಾಸಗೊಳಿಸಲಾದ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುವ ಎರಡೂ ಸಭಾಂಗಣಗಳು ಮದುವೆಗಳು, ನಿಶ್ಚಿತಾರ್ಥಗಳು, ಕಾರ್ಪೊರೇಟ್ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಸೂಕ್ತವಾಗಿವೆ.
” ಅಭಿನಂದನ್”
” ಹೋಟೆಲ್ ಆಶ್ರಯ ಇನ್”ನಲ್ಲಿರುವ ಹೊಸ ಸಭಾಂಗಣವಾದ “ಅಭಿನಂದನ್” ಅನ್ನು ಮದುವೆಗಳು, ಕಾರ್ಪೊರೇಟ್ ಕಾರ್ಯಕ್ರಮಗಳು ಮತ್ತು ಅದ್ಧೂರಿ ಆಚರಣೆಗಳನ್ನು ಆಯೋಜಿಸಲು ವಿನ್ಯಾಸಗೊಳಿಸಲಾಗಿದೆ. ಪ್ರೀಮಿಯಂ ಒಳಾಂಗಣಗಳು, ಸುಧಾರಿತ ಸೌಲಭ್ಯಗಳು ಮತ್ತು ದೋಷರಹಿತ ಸೇವೆಯೊಂದಿಗೆ, ಇದು ತಡೆರಹಿತ ಮತ್ತು ಸೊಗಸಾದ ಕಾರ್ಯಕ್ರಮದ ಅನುಭವವನ್ನು ಖಾತ್ರಿಗೊಳಿಸುತ್ತದೆ.
ಶ್ರಿ ಸಿದ್ದಾರೂಢ ಸ್ವಾಮೀಜಿ ರೈಲ್ವೆ ಸ್ಟೇಶನ್ ಹುಬ್ಬಳ್ಳಿಯಿಂದ 1 ಕಿಮೀ, ಬಸ ನಿಲ್ದಾಣಗಳಿಂದ 3.5 ಕಿಮಿ ಹಾಗೂ ವಿಮಾನ ನಿಲ್ದಾಣದಿಂದ 7.5 ಕಿಮೀ ದೂರದಲ್ಲಿ ಇರುವ ಹೋಟೆಲ್ “ಅಶ್ರಯ ಇನ್” ಖಾಸಗಿ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಡಿ ಸರಾಗವಾಗಿ ತಲುಪಬಹುದಾಗಿದೆ. ಅಲ್ಲದೆ ಇಲ್ಲಿ ತಂಗುವ ಗ್ರಾಹಕರು ” ಲಕ್ಷ್ಮಿ ಪ್ರೈಡ್ ” ಮಾಲ್ ನಲ್ಲಿ ಶಾಪಿಂಗ್ ಹಾಗೂ 8 ಪರದೆಗಳ “ಮಲ್ಟಿ ಫ್ಲೆಕ್ಸ “ನಲ್ಲಿ ಅನಿಯಮಿತ ಮನರಂಜನೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ.
ನೀವು ವಾಸ್ತವ್ಯ ಹೂಡಲು ಯೋಜಿಸುತ್ತಿರಲಿ, ಕಾರ್ಯಕ್ರಮ ಆಯೋಜಿಸುತ್ತಿರಲಿ ಅಥವಾ ಪರಿಪೂರ್ಣ ಪಾಲುದಾರಿಕೆಯನ್ನು ಹುಡುಕುತ್ತಿರಲಿ “ಹೊಟೇಲ್ ಆಶ್ರಯ್ ಇನ್” ಸೌಕರ್ಯ, ಅನುಕೂಲತೆ ಮತ್ತು ಅತ್ಯಾಧುನಿಕತೆಯ ಸೌಲಭ್ಯಗಳ ಮಿಶ್ರಣವನ್ನು ಒಂದೇ ಸೂರಿನಡಿ ನೀಡುತ್ತದೆ. ಪತ್ರಿಕಾ ಗೋಷ್ಠಿಯಲ್ಲಿ ಅಮರನಾಥ್ ಚಾಟ್ನಿ, ವಿಜಯ್ ಚಾಟ್ನಿ ಚಾಟ್ನಿ, ಅಮಿತ ಚಾಟ್ನಿ, ವಿನೀತ್ ಚಾಟ್ನಿ, ವಿನೀತ್ ಚಾಟ್ನಿ, ಸತೀಶ ಹೆಗಡೆ, ಹಾಗೂ ಅರುಣ ಸವದತ್ತಿ ಉಪಸ್ತಿತರಿದ್ದರು