ಕುಂದಗೋಳ: ತಾಲೂಕಿನಲ್ಲಿ ಗ್ರಾಮಗಳನ್ನು ಸಂಪರ್ಕಿಸುವ ಹಲವು ರಸ್ತೆಯ ಪಕ್ಕದಲ್ಲಿ ವಿದ್ಯುತ್ ಕಂಬಗಳು ಭಾಗಿದ್ದು, ಮುಂಜಾಗೃತೆಯಾಗಿ ಅವುಗಳನ್ನು ಕೂಡಲೇ ಸರಿಪಡಿಸುವಂತೆ ಹೆಸ್ಕಾಂ ಅಧಿಕಾರಿಗೆ ತಾಲೂಕು ಗ್ಯಾರಂಟಿ ಸಮೀತಿಯ ಅಧ್ಯಕ್ಷ ಶಿವಾನಂದ ಬೆಂತೂರ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರಿಗೆ ಜಮೀನಿನಲ್ಲಿ ಬೆಳೆಗಳನ್ನು ಬೆಳೆಯಲು ತೊಂದರೆಯಾಗುತ್ತಿದೆ ಎಂದು ದೂರುಗಳು ಬಂದಿದ್ದು. ರೈತರ ಬೆಳೆಗಳು ಹಾಳಾಗದಂತೆ ಸರಿಪಡಿಸುವಂತೆ ಹೇಳಿದರು.
ಹಳೆಯ ಬಟ್ಟೆ ಎಸೆಯೋದು ಅಥವಾ ದಾನ ಮಾಡೋದು.. ಇದರಲ್ಲಿ ಯಾವುದು ಒಳ್ಳೆಯದು?
ಆಹಾರ ಇಲಾಖೆಯು ಮಹತ್ವದಿದ್ದು ಯೋಗ್ಯವಿರುವ ಸಿಬ್ಬಂದಿಯನ್ನು ನೆಮೀಸಬೆಂಕು ಎಂದಾಗ ಆಗ ಮಧ್ಯಪ್ರದೇಶದ ತಹಶೀಲ್ದಾರ ರಾಜು ಮಾವರಕರ್ ಮೊದಲಿನ ಸಿಬ್ಬಂದಿ ಬಗ್ಗೆ ದೂರುಗಳು ಬದ್ದ ಹಿನ್ನೆಲೆ ಅವರನ್ನು ವರ್ಗಾವಣೆ ಮಾಡಲಾಗಿದೆ ಮುಂದೆ ಬರುವಂತ ಸಭೆಯೊಳಗೆ ಒಬ್ಬ ದಕ್ಷ ಆಡಳಿತಗಾರನನ್ನು ನಮ್ಮಲ್ಲಿರುವಂತ ಸಿಬ್ಬಂದಿನೇ ಸದ್ಯ ಮಟ್ಟಿಗೆ ಆಯ್ಕೆ ಮಾಡುತ್ತೇನೆ ಆ ಅಧಿಕಾರಿ ಅನ್ನಭಾಗ್ಯದ ಯಾವುದೇ ಕೆಲಸಗಳು ಸುಲಲಿತವಾಗಿ ನೆರವೇರಿಸುತ್ತಾರೆ ಎಂದು ಭರವಸೆ ನೀಡಿದರು.
ಗೃಹಲಕ್ಷ್ಮಿ ಡಿ ಬಿ ಟಿ ಮುಖಾಂತರ ತೊಂದ್ರೆ ಆಗಿರುವ ಫಲಾನುಭವಿಗಳನ್ನು ಕಚೇರಿಗೆ ಅಲೆದಾಡಸದೆ ಖುದ್ದು ಮುಖ್ಯ ಅಧಿಕಾರಿಯ ಅಂತವನು ಸರಿಪಡಿಸಬೇಕು ಎಂದು ಗ್ಯಾರೆಂಟಿ ಸಮಿತಿಯ ಅಧ್ಯಕ್ಷರು ತಾಕಿತು ಮಾಡಿದರು. ಯುವನಿಧಿ ಅಧಿಕಾರಿಗಳು ಉದ್ಯೋಗ ಮೇಳಕ್ಕೆ ತಾಲೂಕಿನಲ್ಲಿ ಮುಕ್ತ ಅವಕಾಶವಿದೆ ನಿಮಗೆ ದಿನಾಂಕ ಮತ್ತು ಕಾಲೇಜ್ ಒದಗಿಸುತ್ತೇವೆ ನೀವು ಸಿದ್ಧತೆಯಲ್ಲಿರಿ ಹಾಗೂ ನಿಮ್ಮ ಪ್ರಚಾರಕ್ಕೆ ಕಮಡೊಳ್ಳಿ ಕಾಲೇಜನ್ನು ಬರುವಂತ ದಿನಗಳಲ್ಲಿ ಆಯ್ಕೆ ಮಾಡಿಕೊಳ್ಳಿ ಎಂದು ಸೂಚಿಸಿದರು .
ಶಕ್ತಿ ಯೋಜನೆಯಲ್ಲಿ ಬರುವ ಸಾರಿಗೆ ಇಲಾಖೆಯ ವ್ಯವಸ್ತೆ ತಾಲೂಕಿನಲ್ಲಿ ಇಷ್ಟೆಲ್ಲಾ ಸಭೆಯು ಕೈಗೊಂಡರು ಬಗೆಹರಿಯದೆ ಹಾಗೆ ಉಳಿದಿದ್ದರಿಂದ ಏರು ಧ್ವನಿಯಲ್ಲಿ ಅಧ್ಯಕ್ಷರು ತಾಲೂಕಿಗೆ ಹೊಸದಾಗಿ 5 ಬಸ್ಸುಗಳನ್ನು ನೀಡಲು ಮೇಲಾಧಿಕಾರಿಗಳು ಒಪ್ಪಿದ್ದರು ನೀವು ಇನ್ನೂ ಕೂಡ ಕುಂದಗೋಳ ಯಿಂದ ಶಿಗ್ಗಾಂವ, ಯರೇಬೂದಿಹಾಳ್, ಹಿರೇಗುಂಜಳ, ಸಂಕ್ಲಿಪುರ, ಕಳಸ, ಮಾರ್ಗವಾಗಿ ನೀಡುತ್ತಿಲ್ಲ ಕೂಡಲೇ ಬಸ್ ಒದಗಿಸಬೇಕು ಮುಂದಿನ ಸಭೆಗೆ ಖುದ್ದು ಅಧಿಕಾರಿಯ ಬರಬೇಕು ಇಲ್ಲವಾದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು,
ಪ್ರತಿ ಸಭೆಗೆ ಬೇರೆ ಬೇರೆ ಒಬ್ಬ ಅಧಿಕಾರಿ ಬರುವುದರಿಂದ ಗ್ಯಾರಂಟಿ ಸಮಿತಿಯ ಸದಸ್ಯರು ಕೂಡ ಗರಂ ಆದ ಸನ್ನಿವೇಶ ಕಂಡು ಬಂತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್, ಪಂಚ ಗ್ಯಾರಂಟಿ ಯೋಜನೆಯ ಅಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.