ನಮ್ಮ ಹೊಟ್ಟೆಯಲ್ಲಿ ಯಾವಾಗಲೂ 100 ರಿಂದ 150 ಮಿಲಿ ಗ್ಯಾಸ್ ಇರುತ್ತದೆ. ಈ ಗ್ಯಾಸ್ ಹೆಚ್ಚಾದರೆ ದೊಡ್ಡ ಸಮಸ್ಯೆಯಾಗುತ್ತದೆ. ಸಾಮಾನ್ಯವಾಗಿ ಎಲ್ಲರು ಕೂಡ ಗ್ಯಾಸ್ ಮತ್ತು ಹೊಟ್ಟೆ ಉಬ್ಬುವಿಕೆ ಸಮಸ್ಯೆಯನ್ನು ಅನುಭವಿಸಿರುತ್ತಾರೆ. ಹೊಟ್ಟೆಯಲ್ಲಿನ ಗ್ಯಾಸ್ಟ್ರಿಕ್ ಸಮಸ್ಯೆಗಳು ಸಾಮಾನ್ಯವಾಗಿ ಅಹಿತಕರ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಆದರೆ ಹೆಚ್ಚಿನ ವೇಳೆ ಈ ಗ್ಯಾಸ್ಟ್ರಿಕ್ ಹೆಚ್ಚಾದರೆ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಪ್ಪಾದ ಆಹಾರ ಪದ್ಧತಿಯನ್ನು ಅನುಸರಿಸುವುದು ಗ್ಯಾಸ್ ಮತ್ತು ವಾಯು ಸಮಸ್ಯೆಗೆ ಮುಖ್ಯ ಕಾರಣವಾಗಿದೆ.
ಟೆಸ್ಟ್ ಗೆಲ್ಲಲು ಬ್ಯಾಟಿಂಗ್ ಕ್ರಮಾಂಕ ಬದಲಿಸಲು ನಾನು ಸಿದ್ಧ: ಶುಭ್ಮನ್ ಗಿಲ್!
ಇಂದಿನ ದಿನಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಪ್ರತಿಯೊಬ್ಬರನ್ನು ಕಾಡಲು ಶುರುಮಾಡಿದೆ. ಇದಕ್ಕೆಲ್ಲಾ ಜಡ ಜೀವನಶೈಲಿ ಹಾಗೂ ನಾವು ಅನುಸರಿಸುತ್ತಿ ರುವ ಅನಾರೋಗ್ಯಕರ ಆಹಾರ ಪದ್ಧತಿ ಎಂದು ನೇರ ಕಾರಣ ಎಂದು ಹೇಳಬಹುದು. ಆದರೆ ಕೆಲವೊಮ್ಮೆ ಮನೆಯಲ್ಲೇ ಮಾಡಿದ, ಆಹಾರ ಪದಾರ್ಥ ಗಳನ್ನು ಸೇವಿಸಿದರೂ ಕೂಡ ಗ್ಯಾಸ್ಟ್ರಿಕ್ ಸಮಸ್ಯೆ ಆಗಿಬಿಡುತ್ತದೆ
ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದಾಗ, ಮೆಡಿಕಲ್ನಿಂದ ಮಾತ್ರೆ ತಂದು ನುಂಗುವುದು, ನೀರಿಗೆ ಮಿಕ್ಸ್ ಮಾಡುವ ಪೌಡರ್ ತಂದು ಕುಡಿಯುವ ಅಭ್ಯಾಸ ಮಾಡಿಕೊಳ್ಳ ಬೇಡಿ.
ವೈದ್ಯರು ಕೂಡ ಇದನ್ನೇ ಸಲಹೆ ನೀಡುತ್ತಾರೆ. ಇದಕ್ಕಾಗಿ ನಮ್ಮ ದೈನಂದಿನ ಜೀವನಶೈಲಿಯಲ್ಲಿ ನಾವೇ ಕೆಲವೊಂ ದು ಬದಲಾವಣೆಗಳನ್ನು ತಂದುಕೊಂಡು, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಿರಬಹುದು.
ಮಧುಮೇಹ, ರಕ್ತದೊತ್ತಡ, ಕಣ್ಣಿನ ಸಮಸ್ಯೆ, ಕಿಡ್ನಿ ಸಮಸ್ಯೆ ಇದ್ದವರು ಎಲೆಕೋಸನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ.
ಆದರೆ ಪದೇ ಪದೇ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ, ಅಸಿಡಿಟಿ ಸಮಸ್ಯೆ, ಹೊಟ್ಟೆಯ ಸ್ನಾಯು ಸೆಳೆತ ಇತ್ಯಾದಿ ಸಮಸ್ಯೆಗಳು ಇದ್ದವರು ಆದಷ್ಟು ಈ ತರಕಾರಿಯಿಂದ ದೂರವಿದ್ದರೆ ಒಳ್ಳೆಯದು.
ಯಾಕೆಂದ್ರೆ ಎಲೆಕೋಸು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಧಾನ ಗೊಳಿಸುವುದರಿಂದ, ಕೆಲವರಿಗೆ ಬಹಳ ಬೇಗನೇ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ನಂತಹ ಸಮಸ್ಯೆ, ಕಂಡು ಬರುವ ಸಾಧ್ಯತೆ ಇರುತ್ತದೆ.
ಸಕ್ಕರೆಕಾಯಿಲೆ, ಹೃದಯದ ಸಮಸ್ಯೆ, ಮೂಳೆಗಳಿಗೆ ಸಂಬಂಧ ಪಟ್ಟ ಸಮಸ್ಯೆ ಇದ್ದವರಿಗೆ ಇದ್ದವರಿಗೆ, ಮೆದು ಳಿನ ಆರೋಗ್ಯಕ್ಕೆ, ಆಲೂಗಡ್ಡೆ ಬಹಳ ಒಳ್ಳೆಯ ತರಕಾರಿ ಎಂದು ಹೇಳಲಾಗುತ್ತದೆ.
ಪ್ರಮುಖವಾಗಿ ಈ ತರಕಾರಿ ಯಲ್ಲಿ ನಾರಿನಾಂಶ, ಪೊಟ್ಯಾ ಷಿಯಂ, ಮೆಗ್ನೀಸಿಯಮ್, ವಿವಿಧ ಬಗೆಯ ವಿಟಮಿನ್ಸ್ ಅಂಶಗಳು, ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದ ರಿಂದ, ಇಂತಹ ದೀರ್ಘಕಾಲದ ಕಾಯಿಲೆಗಳನ್ನು, ನಮ್ಮಿಂದ ದೂರವಿರಿಸಲು ನೆರವಾಗುತ್ತದೆ
ಆದರೆ ಪದೇ ಪದೇ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲು ತ್ತಿರುವವರು, ಆದಷ್ಟು ಈ ತರಕಾರಿಯಿಂದ ದೂರವಿರ ಬೇಕು. ಯಾಕೆಂದ್ರೆ ಈ ತರಕಾರಿಯಲ್ಲಿ, ಪಿಷ್ಠದ ಪ್ರಮಾಣ ಯಥೇ ಚ್ಛವಾಗಿ ಕಂಡು ಬರುವುದರಿಂದ, ಇವು ಜೀರ್ಣ ಕ್ರಿಯೆ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ
ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ನೀರಿನಾಂಶವನ್ನು ಒಳ ಗೊಂಡಿರುವ ಸೌತೆಕಾಯಿ, ದೇಹಕ್ಕೆ ತಂಪನ್ನು ಒದಗಿಸಿ, ನಿರ್ಜಲೀಕರಣ ಸಮಸ್ಯೆಯಿಂದ ದೂರ ಮಾಡುತ್ತದೆ.
ಹೀಗಾಗಿ ಮಧ್ಯಾಹ್ನದ ಸಮಯದಲ್ಲಿ ಊಟ ಆದ ಮೇಲೆ, ಒಂದೆರಡು ಸಣ್ಣ ಪೀಸ್ ಸೌತೆಕಾಯಿ ತಿನ್ನುವುದು ಅಥವಾ ಊಟಕ್ಕೆ ಮುಂಚೆ ಖಾಲಿ ಹೊಟ್ಟೆಯಲ್ಲಿ ಸೌತೆ ಕಾಯಿ ಜ್ಯೂಸ್ ಸೇವನೆ ಮಾಡುವುದು, ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ
ಆದರೆ ನಿಮಗೆ ಗೊತ್ತಿರಲಿ, ರಾತ್ರಿ ಊಟದ ಬಳಿಕ ಸೌತೆ ಕಾಯಿ ಸೇವನೆ ಮಾಡಿದರೆ, ಜೀರ್ಣಕ್ರಿಯೆ ಪ್ರಕ್ರಿಯೆ ನಿಧಾನಗೊಂಡು, ಗ್ಯಾಸ್ಟ್ರಿಕ್ ಸಮಸ್ಯೆ ಕಂಡುಬರುವ ಸಾಧ್ಯತೆ ಕಂಡು ಬರುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.