ಬೆಂಗಳೂರು:- ಎಕ್ಸ್ ಎಲ್ ನಲ್ಲಿ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಕದ್ದು ಕಳ್ಳ ಎಸ್ಕೇಪ್ ಆಗಿರುವ ಘಟನೆ ನಂದಿನಿ ಲೇಔಟ್ ನ ಪ್ರೀತಿ ನಗರದಲ್ಲಿ ಜರುಗಿದೆ.
ಗಾಡಿ ನಿಲ್ಲಿಸಿ ಸಿಲಿಂಡರ್ ಡೆಲಿವರಿ ಮಾಡಲು ಹೋದಾಗ ಸ್ಕೂಟಿಯಲ್ಲಿ ಬಂದ ಖದೀಮ ರಾಜರೋಷವಾಗಿ ಗ್ಯಾಸ್ ಸಿಲಿಂಡರ್ ಹೊತ್ತೊಯ್ದಿದ್ದಾನೆ. ಹೆಲ್ಮೆಟ್ ಧರಿಸಿ ಸ್ಕೂಟಿಯಲ್ಲಿ ಬಂದ ವ್ಯಕ್ತಿಯಿಂದ ಕೃತ್ಯ ನಡೆದಿದೆ.
ಸಿಲಿಂಡರ್ ಕದಿಯುವ ದೃಶ್ಯ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ. ವಾಪಸ್ ಬಂದಾಗ ಸಿಲಿಂಡರ್ ಇಲ್ಲದನ್ನ ನೋಡಿ ಬಡ ವ್ಯಾಪಾರಿ ಕಂಗಾಲಾಗಿದ್ದಾನೆ.