ಚಾಮರಾಜನಗರ:– ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಅರಣ್ಯ ವ್ಯಾಪ್ತಿಯ ಓಂಕಾರ್ ವಲಯದ ದೇಶಿಪುರ ಕಾಲೋನಿಯಲ್ಲಿ ಹುಲಿ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ನಡೆದಿದೆ. ದೇಶಿಪುರ ಗ್ರಾಮದ ಪುಟ್ಟಮ್ಮ (40) ಎಂಬವರು ಕಾಡಂಚಿನ ಸಮೀಪದ ತಮ್ಮ ಜಮೀನಿನಲ್ಲಿ ಕುರಿ, ಜಾನುವಾರುಗಳನ್ನು ಮೇಯಿಸುತ್ತಿದ್ದಾಗ ಹುಲಿ ಏಕಾಏಕಿ ದಾಳಿ ನಡೆಸಿ ಕೊಂದುಹಾಕಿದೆ.
ಪುಟ್ಟಮ್ಮ ತನ್ನ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದು, ಪ್ರತಿದಿನದಂತೆ ಹಸು, ಕುರಿ ಮೇಯಿಸಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಹುಲಿ ದಾಳಿ ನಡೆಸಿದ್ದು ಪುಟ್ಟಮ್ಮನ ಎದೆ ಭಾಗ, ಕತ್ತನ್ನು ಸೀಳಿ ಕೊಂದುಹಾಕಿದೆ.
ಹುಲಿ ಶಭ್ದ ಕೇಳಿಸಿಕೊಂಡು ಅಕ್ಕಪಕ್ಕದ ಜನರು ಕೂಗಿಕೊಂಡಿದ್ದರಿಂದ ಹುಲಿ ಪುಟ್ಟಮ್ಮನನ್ನು ಬಿಟ್ಟು ಪರಾರಿಯಾಗಿದೆ.
ಅನಾಥರಾದ ಮಕ್ಕಳು:
ಇತ್ತೀಚೆಗಷ್ಟೆ ತಂದೆ ತೀರಿಕೊಂಡಿದ್ದು ಇದೀಗ ಹುಲಿ ದಾಳಿಗೆ ತಾಯಿಯೂ ಮೃತಪಟ್ಟ ಹಿನ್ನೆಲೆಯಲ್ಲಿ ಇಬ್ಬರೂ ಮಕ್ಕಳು ಅನಾಥರಾಗಿದ್ದಾರೆ.
10 ಲಕ್ಷ ರೂ. ಪರಿಹಾರ.
ಹುಲಿ ದಾಳಿಯಿಂದ ಮೃತಪಟ್ಟ ಮಹಿಳೆಯ ಕುಟುಂಬದವರಿಗೆ ಬಂಡೀಪುರ ಅರಣ್ಯ ಇಲಾಖೆಯಿಂದ ಸರ್ಕಾರಿ ನಿಯಮಾನುಸಾಎ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಓಂಕಾರ್ ವಲಯಾಧಿಕಾರಿ ಸತೀಶ್ ತಿಳಿಸಿದ್ದಾರೆ.
ಸರ್ಕಾರಿ ಕೆಲಸಕ್ಕೆ ಒತ್ತಾಯ:-
ಹುಲಿ ದಾಳಿಗೆ ತುತ್ತಾದಪುಟ್ಟಮ್ಮ ಮಕ್ಕಳು ಇದೀಗ ತಂದೆ ತಾಯಿ ಇಬ್ಬರನ್ನೂ ಕಳಕೊಂಡು ಅನಾಥರಾಗಿದ್ದು ಅರಣ್ಯ ಇಲಾಖೆಯು ಸರ್ಕಾರಿ ಇಲಾಖೆಯಲ್ಲಿ ಸೂಕ್ತ ಉದ್ಯೋಗ ನೀಡಬೇಕು ಹಾಗೂ 20 ಲಕ್ಷ ಪರಿಹಾರದ ಹಣ ನೀಡಬೇಕು
ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಗುಂಡ್ಲುಪೇಟೆ ಉಪ ವಿಭಾಗದ ಎಸಿಎಫ್ ಸುರೇಶ್ ಕುಮಾರ್, ಓಂಕಾರ್ ವಲಯದ ಆರ್ಎಫ್ಒ ಸತೀಶ್, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.