ಮಂಡ್ಯ : ಕಾವೇರಿ ಜಲಾಯನ ಪ್ರದೇಶದಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ತಾಲ್ಲೂಕಿನ ಶಿವನಸಮುದ್ರ ಸಮೀಪದ ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತದಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರ ಕಣ್ಮನ ಸೆಳೆದಿದೆ.
ಹುಲಿ ದಾಳಿಗೆ ಮಹಿಳೆ ಸಾವು: ಅನಾಥರಾದ ಮಕ್ಕಳು – 10 ಲಕ್ಷ ಪರಿಹಾರ ಘೋಷಣೆ!
ಜಲಪಾತದ ರಮಣೀಯ ದೃಶ್ಯ ನೋಡಲು ಪ್ರವಾಸಿಗರ ಆಗಮಿಸಿದ್ದಾರೆ. ಎತ್ತರದಿಂದ ಧುಮ್ಮಿಕ್ಕಿ ಹರಿಯುವ ನೀರು ಕಂಡು ಪ್ರವಾಸಿಗರು ಎಂಜಾಯ್ ಮಾಡ್ತಿದ್ದಾರೆ. ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ನಲ್ಲಿ ಗಗನಚುಕ್ಕಿ ಜಲಪಾತಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿತ್ತು. ಪ್ರಸ್ತುತ ವರ್ಷ ಮೇ ತಿಂಗಳ ಕೊನೆಯ ವಾರದಲ್ಲಿಯೇ ಪೂರ್ವ ಮುಂಗಾರು ಪ್ರಾರಂಭವಾಗಿರುವುದರಿಂದ ಜೂನ್ ಮಧ್ಯಭಾಗದಲ್ಲಿಯೇ ಜೀವಕಳೆ ಬಂದಿದ್ದು, ಪ್ರವಾಸಿಗರನ್ನು ವೈಭವದತ್ತ ಕೈಬೀಸಿ ಕರೆಯುತ್ತಿದೆ.