ಕಲಬುರಗಿ: ಮನೆ ಮಂಜೂರು ಮಾಡಿರುವ ಮಾಹಿತಿ ವಹಿರಂಗ ಪಡಿಸಿದ್ರೆ ಸರ್ಕಾರವೆ ಅಲ್ಲಾಡುತ್ತೆ ಎಂದು ಶಾಸಕ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಬಿ ಆರ್ ಪಾಟೀಲ್ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ವಸತಿ ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜೊತೆ ನಡೆದ ಆಡಿಯೋ ಸಂಭಾಷಣೆಯಾಗಿದ್ದು, ಆಡಿಯೋದಲ್ಲಿ ವಸತಿ ಯೋಜನೆಯಡಿ ಹಣ ನೀಡಿದವರಿಗಷ್ಟೇ ಮನೆ ಮಂಜೂರು ಮಾಡಲಾಗ್ತಿದೆ. ನಮ್ಮ ಸರ್ಕಾರವನ್ನೇ ದೂರಲು ನನಗೆ ಬೇಸರವಾಗ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ನಿಮಗೂ ಗ್ಯಾಸ್ಟ್ರಿಕ್ ಸಮಸ್ಯೆ ಇದ್ಯಾ!? ಹಾಗಿದ್ರೆ ಈ ಆಹಾರಗಳನ್ನು ತಪ್ಪದೇ ಸೇವಿಸಿ!
ಆಡಿಯೋದಲ್ಲಿ ಬಿ ಆರ್ ಪಾಟೀಲ್ ಅವರು ನಮ್ಮ ಸರ್ಕಾರದ ವಿರುದ್ಧ ಮಾತನಾಡಲು ನನಗೆ ಬೇಸರ ಆಗ್ತಿದೆ ಎಂದಿದ್ದಾರೆ. ನಾನು ಲೆಟರ್ ಕೊಟ್ರೆ ಮನೆ ಮಂಜೂರು ಆಗಲ್ಲ. ನನ್ನ ಹತ್ರ ಲೆಟರ್ ತೆಗೆದುಕೊಂಡು ಹೋಗಿದ್ದ ಪಂಚಾಯತಿಗೆ ಮನೆ ಮಂಜೂರು ಆಗುತ್ತೆ. ಹಣ ಕೊಟ್ಟವರಿಗೆ ನೀವು ಮನೆ ಮಂಜೂರು ಮಾಡ್ತಾ ಇದ್ದೀರಾ ಎಂದು ಬಿಆರ್ ಪಾಟೀಲ್ ಬೇಸರ ಹೊರಹಾಕಿದ್ದಾರಂತೆ.
ಹಣ ಪಡೆದು ಯಾವ ಗ್ರಾಮಕ್ಕೆ ಎಷ್ಟು ಮನೆಗಳನ್ನು ಮಂಜೂರು ಮಾಡಲಾಗಿದೆ? ಎಂಬ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಈ ಮಾಹಿತಿಯನ್ನ ನಾನು ಬಹಿರಂಗಪಡಿಸಿದ್ರೆ ಸರ್ಕಾರವೇ ಅಲುಗಾಡುತ್ತೆ ಎಂದೂ ಶಾಸಕರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಬಿ.ಆರ್ ಪಾಟೀಲ್ ಅವರು ಸರ್ಫರಾಜ್ ಖಾನ್ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಮೊಬೈಲ್ ಆಡಿಯೋ ವೈರಲ್ ಆಗಿದೆ