ವಿಜಯಪುರ:- ಅಲ್ಪಸಂಖ್ಯಾತರಿಗೆ ವಸತಿಯಲ್ಲಿ 5% ಏರಿಕೆ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜೈನ್, ಸಿಖ್, ಕ್ರೈಸ್ತರು ಅಲ್ಪಸಂಖ್ಯಾತರಿದ್ದಾರೆ. ಅವರಿಗೆ 10% ಮಾತ್ರ, ಮುಸ್ಲಿಂರಿಗೆ 80% ಕೊಡುತ್ತಾರೆ. ಬೆಳಗಾವಿ ಅಧಿವೇಶನದಲ್ಲಿ ನನಗೆ ಹಾಗೂ ಜಮೀರ್ಗೆ ಇದೇ ವಿಷಯದಿಂದ ಜಗಳವಾಗಿತ್ತು. ಮುಸ್ಲಿಂರಿಗೆ 80% ಹಂಚಿಕೆ ಮಾಡಲು ಇರ್ಯಾರು? ಹಿಂದೂಗಳಿಗೆ ಇಲ್ಲಿ ಏನಿಲ್ಲ.
ಊಟ ಮಾಡಿದಾಕ್ಷಣ ಹೊಟ್ಟೆ ಉಬ್ಬುತ್ತಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!
ಸಿದ್ದರಾಮಯ್ಯ, ಡಿಕೆಶಿ ಬಹುತೇಕ ಮೂರು ವರ್ಷದಲ್ಲಿ ಕರ್ನಾಟಕವನ್ನ ಮತ್ತೊಂದು ಕೇರಳ, ಪಶ್ಚಿಮ ಬಂಗಾಳನಂತೆ ಮುಸ್ಲಿಂ ರಾಜ್ಯ ಮಾಡುತ್ತಾರೆ. ಸಿದ್ದರಾಮಯ್ಯ ತಮ್ಮ ಸಮುದಾಯಕ್ಕೆ ಕೊಡುಗೆ ಕೊಡಲಿ. ಕುರಿಗಾಹಿಗಳಿಗೆ 5 ಲಕ್ಷ ರೂ, ಕೊಡಲಿ. ಮುಸ್ಲಿಂರಿಗೆ ಬಿಟ್ಟು ಬೇರೆ ಯಾರಿಗೂ ಕೊಡುತ್ತಿಲ್ಲ. ಕೇವಲ ಸಾಬ್ರೂ, ಸಾಬ್ರೂ ಎನ್ನುತ್ತಾರೆ. ರಾಜ್ಯದಲ್ಲಿ ಸಾಬ್ರೂ ಬಿಟ್ರೇ ಬೇರೆ ಯಾರು ಇಲ್ವಾ? ಎಂದು ಆಗ್ರಹಿಸಿದರು