ಹಾಸನ: ಇಂದು 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಮಾಡಲಾಗಿದೆ.
ಮಳೆ ಅವಾಂತರ: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ; ಬೆಂಗಳೂರು – ಮುರುಡೇಶ್ವರ ಟ್ರೈನ್ ಸ್ಥಗಿತ!
ಕೇಂದ್ರ ಸಚಿವ ವಿ ಸೋಮಣ್ಣ ನೇತೃತ್ವದಲ್ಲಿ ವಿಶ್ವಪಾರಂಪರಿಕ ತಾಣ ಐತಿಹಾಸಿಕ ಹಳೆಬೀಡಿನಲ್ಲಿ ಯೋಗ ನಡೆದಿದ್ದು, ಶಾಸಕ ಎಚ್ಕೆ ಸುರೇಶ್, ಹಳೆಬೀಡಿನ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮಿಜಿ ಹಾಗು ಜಿಲ್ಲೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ಸಹಸ್ರಾರು ವಿಧ್ಯಾರ್ಥಿಗಳು, ಸಾರ್ವಜನಿಕರಿಂದ ಸಾಮೂಹಿಕ ಯೋಗಾಭ್ಯಾಸದಲ್ಲಿ ನಿರತರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಅಧಿಕಾರಿಗಳ ಯಡವಟ್ಟು:-
ಕೇಂದ್ರ ಸಚಿವ ವಿ ಸೋಮಣ್ಣ ಭಾಗಿಯಾಗಿದ್ದ 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅಧಿಕಾರಿಗಳ ಯಡವಟ್ಟು ಬಯಲಾಗಿದೆ.
ಪ್ರಧಾನಿ ಮೋದಿ ಭಾಷಣ ವೇಳೆ ಲೈವ್ ಸ್ಟ್ರೀಮಿಂಗ್ ಕೈಕೊಟ್ಟಿದ್ದು, ನೇರ ಪ್ರಸಾರದಲ್ಲಿ ಸಮಸ್ಯೆ ಆಗಿದ್ದರಿಂದ ಅಧಿಕಾರಿಗಳ ಮೇಲೆ ಸಚಿವರು ಗರಂ ಆದರು. ತಾಂತ್ರಿಕ ಸಿಬ್ಬಂದಿ ವಿರುದ್ದ ಸಚಿವರು ಅಸಮಧಾನ ಹೊರ ಹಾಕಿದ್ದಾರೆ.
ನೇರ ಪ್ರಸಾರದಲ್ಲಿ ಸಮಸ್ಯೆ ಹಿನ್ನೆಲೆಯಲ್ಲಿ ಪ್ರಧಾನಿ ಭಾಷಣವನ್ನು
ಮೊಬೈಲ್ ಮೂಲಕ ಸಚಿವರು ವೀಕ್ಷಿಸಿದರು. ಇನ್ನೂ ಕಾರ್ಯಕ್ರಮ ಅವ್ಯವಸ್ಥೆ ಬಗ್ಗೆ ಸಚಿವರು ಅಸಮಧಾನ ಹೊರ ಹಾಕಿದ್ದಾರೆ. ಕಾರ್ಯಕ್ರಮ ಯಡವಟ್ಟು ಮಾಡಿದವರಿಗೆ ನೊಟೀಸ್ ನೀಡಲು ಸಕಲೇಶಪುರ ಉಪ ವಿಭಾಗ ಅದಿಕಾರಿ ಶೃತಿ ಅವರಿಗೆ ಸೂಚನೆ ನೀಡಿದ್ದಾರೆ.