ಹಾಸನ: ಕಾಂಗ್ರೆಸ್ ಈ ದೇಶದಲ್ಲಿ ಇದೇ ಎಂದುಕೊಳ್ಳಲು ಅಸಹ್ಯವಾಗುತ್ತೆ ಎಂದು ರಾಜ್ಯ ರೈಲ್ವೆ ಮತ್ತು ಜಲಶಕ್ತಿ ಕೇಂದ್ರ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ. ಬೇಲೂರು ತಾಲ್ಲೂಕಿನ ಹಳೇಬೀಡಿನಲ್ಲಿ ಮಾತನಾಡಿದ ಅವರು,
ವಸತಿ ಇಲಾಖೆ ಪವಿತ್ರವಾದ ಇಲಾಖೆ. ನಾನು ವಸತಿ ಸಚಿವನಾಗಿ ಲಕ್ಷಾಂತರ ಕುಟುಂಬಗಳಿಗೆ ನಿವೇಶನ ನೀಡಿದ್ದೇನೆ. ಜಮೀರ್ ಅಹಮದ್ ಮೊದಲು ಕಚೇರಿಯಲ್ಲಿ ಕೂರಲಿ. ಯಾವ ಆಧಾರದ ಮೇಲೆ ಕೊಡುತ್ತೀರಿ?
ಟೆಕ್ ಉದ್ಯಮಕ್ಕೆ ಸೆಡ್ಡು: 16ನೇ ವಯಸ್ಸಿನಲ್ಲಿಯೇ 100 ಕೋಟಿ ಮೌಲ್ಯದ ಕಂಪನಿಯ ಮುಖ್ಯಸ್ಥೆ..!
ಯಾರಾದರೂ ಕೋರ್ಟ್ಗೆ ಹೋದರೆ ಎಷ್ಟು ಛೀಮಾರಿ ಹಾಕುತ್ತೆ. ಅನಾವಶ್ಯಕವಾಗಿ ಒಂದು ಸಮಾಜವನ್ನು ಇನ್ನೊಂದು ಸಮಾಜದ ಮೇಲೆ ಎತ್ತಿಕಟ್ಟುತ್ತೀರಿ, ಇದೇ ನಿಮ್ಮ ಚಾಳಿ. ಇದಕ್ಕೆ 125 ವರ್ಷ ಕಾಂಗ್ರೆಸ್ಗೆ ಬೇಕಾ? ಇಂತಹ ಕಾಂಗ್ರೆಸ್ ಈ ದೇಶದಲ್ಲಿ ಇದೇ ಎಂದುಕೊಳ್ಳಲು ಅಸಹ್ಯವಾಗುತ್ತೆ. ಇದರ ಅವಶ್ಯಕತೆ ಇಲ್ಲ ಎಂದರು.