ಬೆಂಗಳೂರು: ಲಂಚಕೊಟ್ಟವರಿಗೆ ಮಾತ್ರ ವಸತಿ ನಿಗಮದಲ್ಲಿ ಮನೆಗಳನ್ನ ಮಂಜೂರು ಮಾಡಲಾಗಿದೆ‘ ಎಂದು ಆಳಂದ ಶಾಸಕ ಬಿ ಆರ್ ಪಾಟೀಲ್ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋವೊಂದು ವೈರಲ್ ಆಗಿದೆ. ಇದ್ರಿಂದ ಮತ್ತೊಮ್ಮೆ ಸರ್ಕಾರಕ್ಕೆ ಮುಜುಗರ ಆಗುವಂತಾಗಿದೆ.
ಟೆಕ್ ಉದ್ಯಮಕ್ಕೆ ಸೆಡ್ಡು: 16ನೇ ವಯಸ್ಸಿನಲ್ಲಿಯೇ 100 ಕೋಟಿ ಮೌಲ್ಯದ ಕಂಪನಿಯ ಮುಖ್ಯಸ್ಥೆ..!
ಬೆಂಗಳೂರಿನಲ್ಲಿ ಮಾತಾಡಿದ ಶಾಸಕ ಬಿ.ಆರ್.ಪಾಟೀಲ್, ತಾನು ಸರ್ಫ್ರಾಜ್ ಜೊತೆ ಮಾತಾಡಿದ್ದು ನಿಜ, ಮತ್ತು ಸಿಎಂ ಕರೆದರೆ ಹೋಗಿ ಮಾತಾಡಲು ಸಿದ್ಧನಿದ್ದೇನೆ ಎಂದರು. ಹೇಳಬೇಕಾಗಿದ್ದೆಲ್ಲವನ್ನು ಹೇಳಿದ್ದೇನೆ, ಭ್ರಷ್ಟಾಚಾರ ಎಲ್ಲ ಸರ್ಕಾರಗಳ ಅವಧಿಯಲ್ಲಿ ನಡೆಯುತ್ತದೆ,
ಅದರೆ ಕಾಂಗ್ರೆಸ್ ಜನಪರ ಆಡಳಿತ ನೀಡುವ ಭರವೆಯೊಂದಿಗೆ ಅಧಿಕಾರಕ್ಕೆ ಬಂದಿರೋದ್ರಿಂದ ಹೀಗೆಲ್ಲ ಆಗಬಾರದಿತ್ತು ಎಂದು ಹೇಳಿದ್ದಾರೆ. ವಸತಿ ಯೋಜನೆಯಲ್ಲಿ ಲಂಚದ ಆರೋಪದ ಕುರಿತು ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಮತ್ತು ವಸತಿ ಸಚಿವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ನಡುವಿನ ಆಡಿಯೋ ಸೋರಿಕೆಯಾಗಿರುವುದು ಕರ್ನಾಟಕ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದೆ.