ಬೆಂಗಳೂರು: ನಾನು ದ್ವೇಷ ಭಾಷಣ ಮಾಡಿದ್ರು ಸಹ ನನಗೂ ನೋಟೀಸ್ ಜಾರಿ ಆಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದ್ವೇಷ ಭಾಷಣ ಮಾಡಿದ್ರೆ ಸುಮ್ಮನೆ ಇರೋಕೆ ಆಗುತ್ತಾ? ಯಾರೇ ದ್ವೇಷ ಭಾಷಣ ಮಾಡಿದ್ರು ನೊಟೀಸ್ ಜಾರಿ ಆಗುತ್ತದೆ. ನಾನೇ ದ್ವೇಷ ಭಾಷಣ ಮಾಡಿದ್ರು ನನಗೂ ನೋಟೀಸ್ ಜಾರಿ ಆಗುತ್ತದೆ ಎಂದಿದ್ದಾರೆ.
ಟೆಕ್ ಉದ್ಯಮಕ್ಕೆ ಸೆಡ್ಡು: 16ನೇ ವಯಸ್ಸಿನಲ್ಲಿಯೇ 100 ಕೋಟಿ ಮೌಲ್ಯದ ಕಂಪನಿಯ ಮುಖ್ಯಸ್ಥೆ..!
ಕಾನೂನು ಬಾಹಿರವಾಗಿ ಯಾರು ನಡೆದುಕೊಳ್ಳಬೇಕು. ಅವರ ಭಾಷಣ ಸರಿಯಿಲ್ಲ. ಅವರು ತಪ್ಪಾಗಿ ಭಾಷಣ ಮಾಡಿದ್ರೆ ನಾವೇನು ಮಾಡೋಣ. ನೆಹರು, ಇಂದಿರಾಗಾಂಧಿಯನ್ನ ನಿತ್ಯವೂ ಸೂಲಿಬೆಲೆ ಟೀಕೆ ಮಾಡ್ತಾರೆ. ದ್ವೇಷ ಭಾಷಣದ ಹೇಳಿಕೆ ಕೊಟ್ಟಾಗ ಕ್ರಮ ತೆಗೆದುಕೊಳ್ತೇವೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರು ಯಾವುದೇ ತಪ್ಪು ಮಾಡದೇ ಹೋದ್ರು, ಕೇಸ್ ಬುಕ್ ಮಾಡಿ ಅವರ ಎಂಪಿ ಸ್ಥಾನ ಕಿತ್ತುಕೊಂಡಿದ್ದರು. ರಾಹುಲ್ ಅವರೇನು ದ್ವೇಷ ಭಾಷಣ ಮಾಡಿದ್ರಾ? ಆದರೂ ಅವರ ಮೇಲೆ ಕ್ರಮ ಮಾಡಿದ್ರಿ. ಯಾರು ದ್ವೇಷ ಭಾಷಣ ಮಾಡಬಾರದು. ಸಾಮರಸ್ಯವಾಗಿ ಇರಬೇಕು ಎಂದು ತಿರುಗೇಟು ನೀಡಿದ್ದಾರೆ.