ಕುಶಾಲನಗರ: ಕಳೆದ ಮೂರು ದಿವಸಗಳ ಹಿಂದೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಸಮೀಪದ ತೆಪ್ಪದಕಂಡಿಯಲ್ಲಿ ಕಾವೇರಿ ಹೊಳೆಗೆ ಹಾರಿ ಕಣ್ಮರೆ ಆಗಿದ್ದ ಚೆಟ್ಟಳ್ಳಿ ನಿವಾಸಿ, ಮಾಜಿ ಯೋಧ ಗಿರೀಶ್ ರವರ ಮೃತದೇಹ ಇಂದು ಪತ್ತೆ ಯಾಗಿದೆ. ಕುಶಾಲನಗರ ಪೊಲೀಸರು, ಅಗ್ನಿ ಶಾಮಕ ದಳ, ಎನ್.ಡಿ.ಆರ್.ಎಫ್. ಮತ್ತು ದುಬಾರೆ ಸಿಬ್ಬಂದಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ನಿಸರ್ಗಧಾಮ ಬಳಿಯ ಕಾವೇರಿ ನದಿಯಲ್ಲಿ ಮೃತದೇಹವೊಂದು ತೇಲಿ ಬರುತ್ತಿದ್ದುದು ಕಂಡುಬಂದಿದೆ.
ಟೆಕ್ ಉದ್ಯಮಕ್ಕೆ ಸೆಡ್ಡು: 16ನೇ ವಯಸ್ಸಿನಲ್ಲಿಯೇ 100 ಕೋಟಿ ಮೌಲ್ಯದ ಕಂಪನಿಯ ಮುಖ್ಯಸ್ಥೆ..!
ನಿಸರ್ಗ ಧಾಮ ಗ್ರೀನ್ ಲ್ಯಾಂಡ್ ಹಿಂಭಾಗದಲ್ಲಿ ನದಿಯಿಂದ ಹೊರಕ್ಕೆ ತಂದು ಪರಿಶೀಲಿಸಿದಾಗ ಅದು ಗಿರೀಶ್ ರವರ ಗಿರೀಶ್ ರವರ ಮೃತ ದೇಹವೆಂದು ಗುರುತಿಸಲಾಗಿದೆ. ಮೃತ ಗೀರಿಶ್ ಮೃತದೇಹವನ್ನ ಕುಶಾಲನಗರ ಶವಗಾರಕ್ಕೆ ರವಾನಿಸಲಾಗಿದೆ. ಇನ್ನು ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಾರ್ಯಚರಣೆಯಲ್ಲಿ ದುಬಾರೆ ರ್ಯಾಫ್ಟಿಂಗ್ ಸಿಬ್ಬಂದಿಗಳು, ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ಭಾಗಿಯಾಗಿದ್ದಾರೆ.