ದೇವನಹಳ್ಳಿ:- ಆಗಸದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ಇಂಧನ ಖಾಲಿ ಹಿನ್ನೆಲೆ ವಿಮಾನ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕಳೆದ 19 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಭ್ರಷ್ಟಾಚಾರದ ವಿರುದ್ಧ ಮಾತನಾಡುವವರಿಗೆ ಕಾಂಗ್ರೆಸ್ನಲ್ಲಿ ಮರ್ಯಾದೆ ಇಲ್ಲ:ಬಸವರಾಜ ಬೊಮ್ಮಾಯಿ
ಇಂಡಿಗೋ ವಿಮಾನ ತುರ್ತು ಭೂಸ್ವರ್ಶ ಹಿನ್ನೆಲೆ ಅದೃಷ್ಟವಶಾತ್ ಮತ್ತೊಂದು ಭಾರಿ ಅನಾಹುತ ತಪ್ಪಿದೆ. ಗುವಾಹಟಿಯಿಂದ ಚೆನೈ ಗೆ ತೆರಳುತ್ತಿದ್ದ ಇಂಡಿಗೋ 6E-6764 ವಿಮಾನ ಇದಾಗಿದ್ದು, 180 ಜನ ಪ್ರಯಾಣಿಕರನ್ನ ಹೊತ್ತು ಸಾಗುತ್ತಿತ್ತು ಎನ್ನಲಾಗಿದೆ. ಇಂಧನ ಖಾಲಿಯಾದ ಹಿನ್ನೆಲೆ ಪೈಲೆಟ್ ನಿಂದ ಮೇ ಡೇ ಎಂದು ಘೋಷಿಸಿದ ಹಿನ್ನೆಲೆ ತುರ್ತು ಭೂಸ್ವರ್ಶ ಮಾಡಲಾಗಿದೆ.
ಅದೃಷ್ಟವಶಾತ್ ಸೇಪ್ ಅಗಿ ವಿಮಾನ ಲ್ಯಾಂಡ್ ಆಗಿದೆ. ಲ್ಯಾಂಡಿಂಗ್ ನಂತರ ಇಂಧನ ತುಂಬಿಕೊಂಡು ಪೈಲೆಟ್ ಚೆನೈ ಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.