ಮಂಡ್ಯ:- ಅಂಗಡಿ ಮತ್ತು ಹೋಟೇಲ್ ನ ಬೀಗ ಮುರಿದು ಕಳ್ಳರು ಕೈಚಳಕ ತೋರಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಹಳೇ ಮೈ ಬೆಂ ಹೆದ್ದಾರಿಯಲ್ಲಿ ಜರುಗಿದೆ. ಹೆದ್ದಾರಿ ಬದಿಯ ಅಕುಲ್ ಟೀ ಸ್ಟಾಲ್ ಹಾಗು ಹೋಟೆಲ್ ಗೆ ತಡರಾತ್ರಿ ಖದೀಮರು ಕನ್ನ ಹಾಕಿದ್ದಾರೆ.
ಬೀಗ ಮುರಿದು ಒಳ ನುಗ್ಗಿದ ಖದೀಮರು, ಗಲ್ಲದಲ್ಲಿದ್ದ ಹಣ, ಸಿಗರೇಟ್,ಚಾಕಲೇಟ್ಸ್ ದೋಚಿ ಪರಾರಿ ಆಗಿದ್ದಾರೆ. ಕಳ್ಳತನದ ವೇಳೆ ಹೋಟೆಲ್ ನಲ್ಲಿ ಅಡುಗೆ ಮಾಡಿಕೊಂಡು ಊಟ ಬೇರೆ ಮಾಡಿ ಮಾಡಿದ್ದಾರೆ. ಸ್ಥಳಕ್ಕೆ ಮದ್ದೂರು ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮದ್ದೂರು ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.