ಬೆಂಗಳೂರು:- ಜೂನ್ 4 ರಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಹನ್ನೊಂದು ಜನ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ನಲ್ಲಿ PIL ಅರ್ಜಿ ವಿಚಾರಣೆ ನಡೆಯಲಿದೆ.
ಬರುತ್ತೇನೆ ಇಲ್ಲೇ ಇರು ಎಂದು ಬೀದಿಯಲ್ಲಿ ಮಾನಸಿಕ ಅಸ್ವಸ್ಥ ತಾಯಿ ಬಿಟ್ಟು ಮಗ ಎಸ್ಕೇಪ್!
ದ್ವಿಸದಸ್ಯ ಪೀಠದಲ್ಲ ಅರ್ಜಿ ವಿಚಾರಣೆ ನಡೆಯಲಿದೆ. ಸರ್ಕಾರದ ಪರ ಹಿರಿಯ ವಕೀಲ ಉದಯ್ ಹೊಳ್ಳರಿ ಮಂಡನೆ ಮಾಡಲಿದ್ದಾರೆ. RCB, DNA, KSCA ಸಂಸ್ಥೆಗಳೂ ಘಟನೆಗೆ ಜವಾಬ್ದಾರಿ ಎಂದು ಕೋರ್ಟ್ ಪರಿಗಣಿಸಿದ್ದು, ಘಟನೆಯಲ್ಲಿ ಅವರೂ ಜವಾಬ್ದಾರರು ಎಂದು PIL ಅರ್ಜಿಯಲ್ಲಿ ಪರಿಗಣನೆ ಮಾಡಲಾಗಿದೆ. ಮೂರು ಸಂಸ್ಥೆಗಳಿಗೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ನೀಡಿತ್ತು. ಮಧ್ಯಂತರ ಅರ್ಜಿಗಳ ಬಗ್ಗೆಯೂ ಇಂದು ನಿರ್ಧಾರ ಆಗಲಿದೆ.
ಘಟನೆಯ ಬಗ್ಗೆ ಬೇರೆ ವಕೀಲರಿಂದಲೂ PIL ಸಲ್ಲಿಕೆ ಮಾಡಲಾಗಿದೆ. ಮಧ್ಯಂತರ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆಯೂ ನಿರ್ಧಾರ ಆಗಲಿದೆ. ಇಂದು RCB, DNA, KSCA ಪರ ವಕೀಲರಿಂದ ವಾದ ಮಂಡನೆ ಸಾಧ್ಯತೆ ಇದೆ.
ಘಟನೆ ಹಿನ್ನೆಲೆ:
18 ವರ್ಷಗಳ ಬಳಿಕ ಆರ್ಸಿಬಿ ತಂಡವು ಐಪಿಎಲ್ ಕಪ್ ಗೆದ್ದ ಸಂಭ್ರಮದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದರು.