ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ-ನಿಟ್ರೆ ರಸ್ತೆ ತೋಟಪ್ಪ ಎಂಬುವವರ ಬಾಳೆ ತೋಟದಲ್ಲಿ ಹುಲಿ ಬಿಸಿಲಿಗೆ ಮೈಯೊಡ್ಡಿ ಘರ್ಜಿಸುವ ಮೂಲಕ ರೈತರು ಹಾಗೂ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡ ಪ್ರಸಾದ್ ತೋಟದ ಬಳಿ ತೋಟಪ್ಪ ಅವರ ಬಾಳೆ ತೋಟದ ಪಂಪ್ ಹೌಸ್ ಮೇಲೆ ಚಿರತೆ ಕಾಣಿಸಿಕೊಂಡಿದ್ದನ್ನು ಕಂಡುಸಾರ್ವಜನಿಕರು ಭಯಗೊಂಡಿದ್ದಾರೆ.
ನಿಂಬೆ ಸಿಪ್ಪೆ ಬಿಸಾಕೋ ಮುನ್ನ ಈ ಸ್ಟೋರಿ ನೋಡಿ: ಇದರಿಂದಾಗುವ ಲಾಭ ಎಷ್ಟು ಗೊತ್ತಾ?
ಬಂಡೀಪುರ ಅಭಯಾರಣ್ಯದಿಂದ ಹೊರಬಂದು ಗ್ರಾಮೀಣ ಭಾಗದಲ್ಲಿ ಸಂಚಸಿರುತ್ತಿರುವ ಹುಲಿ ಅಪಾಯಕಾರಿಯಾಗಿದ್ದು ಕಳೆದ ಮೂರು ದಿನದ ಹಿಂದೆ ದೇಶಿಪುರ ಕಾಲೋನಿಯಲ್ಲಿ ಮಹಿಳೆಯನ್ನು ಹುಲಿಯು ಸಾಯಿಸಿತ್ತು
ಇದೀಗ ಹಳ್ಳಿಗಳತ್ತ ಹುಲಿ ಸಂಚರಿಸುತ್ತಿರುವುದು ಅಪಾಯಕಾರಿಯಾಗಿದ್ದು ಜನರ ಮೇಲೆ ದಾಳಿ ನಡೆಸುವ ಮುನ್ನಾ ಕೂಡಲೆ ಹುಲಿ ಸೆರೆಗೆ ಅರಣ್ಯ ಇಲಾಖೆ ಮುಂದಾಗಬೇಕು ಎಂದು ರೈತ ಮುಖಂಡ ಬೆಟ್ಟದಮಾದಳ್ಳಿ ಷಣ್ಮಖುಸ್ವಾಮಿ ಒತ್ತಾಯಿಸಿದ್ದಾರೆ.