ಹಾವೇರಿ: ಈಗಿರುವ ಸಿದ್ದರಾಮಯ್ಯ ಲೂಟಿ ಮಾಡೋರಿಗೆ ಗಾಡ್ ಫಾದರ್ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಹಾವೇರಿ ನಗರದಲ್ಲಿ ಮಾತನಾಡಿದ ಅವರು, ವಸತಿ ಸಚಿವ ಜಮೀರ್ ಅಹ್ಮದ್ ಖಾತೆಯಲ್ಲಿ ಕೋಟ್ಯಾಂತರ ರೂಪಾಯಿ ಲೂಟಿ ಆಗ್ತಿದೆ ಅಂತ ಹೇಳಿದ್ರೂ ಕ್ರಮ ಇಲ್ಲ. ಈಗಿರುವ ಸಿದ್ದರಾಮಯ್ಯ ಲೂಟಿ ಮಾಡೋರಿಗೆ ಗಾಡ್ ಫಾದರ್. ಕಾಸು ಮಾಡೋರಿಗೆ ರಕ್ಷಣೆ ನೀಡ್ತಾ ಇದ್ದಾರೆ ಎಂದು ಕಿಡಿಕಾರಿದರು.
ನಿಂಬೆ ಸಿಪ್ಪೆ ಬಿಸಾಕೋ ಮುನ್ನ ಈ ಸ್ಟೋರಿ ನೋಡಿ: ಇದರಿಂದಾಗುವ ಲಾಭ ಎಷ್ಟು ಗೊತ್ತಾ?
ಇನ್ನು 6 ತಿಂಗಳಲ್ಲಿ ಸಿಎಂ ಸ್ಥಾನ ಬೇರೆಯವರಿಗೆ ಬಿಟ್ಟು ಕೊಡಬೇಕು. ಅದಕ್ಕೆ ಲೂಟಿ ಮಾಡೋರಿಗೆ ಅವಕಾಶ ನೀಡ್ತಿದ್ದಾರೆ. ಇಡೀ ಮುಡಾ ಬಗೆದರೆ 3000 ಕೋಟಿ ಹಗರಣ ಆಗಿದೆ. ಬಿಹಾರ್ ಚುನಾವಣೆಗಾಗಿ ಹಣ ಸಂಗ್ರಹ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಎಲ್ಲಾ ಮಂತ್ರಿಗಳಿಗೂ ಹಣ ಫಿಕ್ಸ್ ಆಗಿದೆ. ಒಬ್ಬೊಬ್ಬ ಮಂತ್ರಿ 25 ಕೋಟಿ ಕೊಡಬೇಕು. 25 ಕೋಟಿ ಕೊಟ್ಟರೆ ಮಂತ್ರಿ ಸ್ಥಾನ ಸೇಫು. ಇಲ್ಲದಿದ್ದರೆ ರಿಶಫಲ್ ಮಾಡ್ತೀವಿ ಅಂತ ಗೂಬೆ ಕೂರಿಸ್ತಾರೆ. ಅಲ್ಲಿ ದುಡ್ಡು ಕೊಟ್ಟೋರಿಗೆ ಮಂತ್ರಿಸ್ಥಾನ, ಇಲ್ಲಿ ದುಡ್ಡು ಕೊಟ್ಟೋರಿಗೆ ಮನೆ ಎಂದು ವ್ಯಂಗ್ಯವಾಡಿದರು.
ಬಡವರಿಗೆ ಅನ್ನ ಕೊಡುವಂತಹ ಕಾಯಕ ಹೌಸಿಂಗ್ ಬೋರ್ಡ್ ಮಾಡಬೇಕಿತ್ತು. ಆದರೆ ಬಡವರ ಮನೆಗೆ ಕನ್ನ ಹಾಕೋ ಕೆಲಸ ಮಾಡಿದ್ದಾರೆ. ನಾವು ಹೌಸಿಂಗ್ ಬೋರ್ಡ್ ಆಫೀಸ್ಗಳಿಗೆ ಮುತ್ತಿಗೆ ಹಾಕ್ತೀವಿ. ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಆರ್ ಅಶೋಕ್ ತಿಳಿಸಿದರು.