ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮತ್ತೆ ಮಳೆಯ ಆರ್ಭಟ ಹೆಚ್ಚಾಗಿದ್ದು ಕಾವೇರಿ ನದಿ ತುಂಬಿ ಹರಿಯುತ್ತಿದೆ. ತಲಕಾವೇರಿ ಭಾಗಮಂಡಲದಲ್ಲಿ ಭಾರಿ ಮಳೆಗಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನಲೆ ನದಿ ನೀರು ಹೆಚ್ಚಾಗಿ ಬೆಂಗೂರು ಗ್ರಾಮದ ದೋಣಿಕಾಡು ಎಂಬಲ್ಲಿ ರಸ್ತೆಯ ಮೇಲೆ ನೀರು ಬಂದಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಈ ಭಾಗದಲ್ಲಿ 20ಕ್ಕು ಹೆಚ್ಚು ಮನೆಗಳಿದ್ದು ರಸ್ತೆ ಬಂದ್ ಅದ ಹಿನ್ನಲೆ ಒಂದು ಬದಿಯಿಂದ ಮತ್ತೊಂದು ಬದಿಗೆ ಓಡಾಡಲು ಸರ್ಕಾರ ಕಲ್ಪಿಸಿರೋ ಬೋಟ್ ನಲ್ಲೆ ಓಡಾಟುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕೂಡ ರಸ್ತೆ ಬಂದ್ ಆಗಿ ದೋಣಿಯಲ್ಲೆ ಇಲ್ಲಿನ ನಿವಾಸಿಗಳು ಓಡಾಡುತ್ತಿದ್ದರು. ಇದೀಗ ಮತ್ತೆ ನೀರು ತುಂಬಿದ್ದು ದೋಣಿಕಾಡು ಭಾಗದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಪತ್ರಿ ಮಳೆಗಾಲದಲ್ಲು ಈ ಭಾಗದ ಜನತೆ ಇದೆ ಸಮಸ್ಯೆ ಎದುರಿಸುತ್ತಿದ್ದಾರೆ.