ಧಾರವಾಡ:- ಇಲ್ಲಿನ ಗರಗ ಗ್ರಾಮದಲ್ಲಿ ದಾಸ್ತಾನು ಮಾಡಲಾಗಿದ್ದ ಪಿಓಪಿ ಗಣಪತಿಗಳನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಒಟ್ಟು 184 ಗಣಪತಿ ವಿಗ್ರಹಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಅಮೇರಿಕಾವು ಇರಾನ್ ಮೇಲೆ ದಾಳಿ ಮಾಡಿದ್ದು ತಪ್ಪು : ಮಲ್ಲಿಕಾರ್ಜುನ ಖರ್ಗೆ!
ವಿನಾಯಕ್ ಪತ್ತಾರ ಎನ್ನುವವರಿಗೆ ಸೇರಿದ ಗೋಡೌನ್ ನಲ್ಲಿ ಎರಡು ಬೃಹತ್ ಗಣಪತಿ ಸೇರಿ ಸಣ್ಣ ಪ್ರಮಾಣದ ವಿಗ್ರಹಗಳನ್ನು ಜಪ್ತಿ ಮಾಡಲಾಗಿದೆ. ಖಚಿತ ಮಾಹಿತಿ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಸೀಜ್ ಮಾಡಿದರು. ಬಳಿಕ ಜಪ್ತಿ ಮಾಡಿದ ವಿಗ್ರಹಗಳನ್ನು ಡಿಸಿ ದಿವ್ಯ ಪ್ರಭು ಪರಿಶೀಲಿಸಿ ದಾಸ್ತಾನುದಾರರು ಮೇಲೆ ಎಫ್ಐಆರ್ ದಾಖಲಿಸುವಂತೆ ಸೂಚನೆ ಕೊಟ್ಟಿದ್ದಾರೆ.
ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದೆ.