Close Menu
Ain Live News
    Facebook X (Twitter) Instagram YouTube
    Tuesday, June 24
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮಂಗಳವಾರ ಸಂಜೆ ಹೀಗೆ ಮಾಡಿದ್ರೆ ಕಷ್ಟಗಳೆಲ್ಲಾ ಕ್ಷಣಾರ್ಧದಲ್ಲಿ ಮಾಯವಾಗತ್ತೆ!

    By AIN AuthorJune 24, 2025
    Share
    Facebook Twitter LinkedIn Pinterest Email
    Demo

    ಸನಾತನ ಧರ್ಮದಲ್ಲಿ ಪ್ರತಿ ದಿನವೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಮಂಗಳವಾರವನ್ನು ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಆ ದಿನ ಹನುಮಂತನನ್ನು ಪೂಜಿಸುವುದರಿಂದ ಶುಭಫಲಗಳು ಲಭಿಸುತ್ತದೆ ಎಂದು ನಂಬಲಾಗಿದೆ.

    ಮಂಗಳವಾರದ ದಿನದಂದು ಸಂಜೆ ಸಮಯದಲ್ಲಿ ನಾವು ಇವುಗಳನ್ನು ಮಾಡುವುದರಿಂದಲೂ ಶನಿ ದೋಷ ಹಾಗೂ ಶನಿ ದೇವನು ನಮಗೆ ನೀಡುವಂತಹ ಸಮಸ್ಯೆಗಳಿಂದಲೂ ಪರಿಹಾರ ದೊರೆಯುವುದು. ಮಂಗಳವಾರದ ದಿನದಂದು ಸಂಜೆ ನಾವು ಯಾವ ಕೆಲಸಗಳನ್ನು ಮಾಡಿದರೆ ಶನಿ ಸಮಸ್ಯೆಗಳು ಪರಿಹಾರವಾಗುವುದು.? ಮಂಗಳವಾರ ದಿನದಂದು ಸಂಜೆ ನೀವು ಇವುಗಳನ್ನು ಮಾಡಿ.

    ಮಂಗಳವಾರದ ದಿನದಂದು ಶನಿ ಮಂತ್ರವನ್ನು ಪಠಿಸುವುದು ನಿಮಗೆ ಅದ್ಭುತವಾದ ಪ್ರಯೋಜನವನ್ನು ನೀಡುತ್ತದೆ. ಮಂಗಳವಾರದ ದಿನದಂದು ಸಂಜೆ ಸಂಪೂರ್ಣವಾಗಿ ಶುದ್ಧರಾಗಿ ಒಂದು ಶಾಂತವಾದ ಸ್ಥಳದಲ್ಲಿ ಕುಳಿತು ಸಂಪೂರ್ಣ ಏಕಾಗ್ರತೆಯಿಂದ ಈ ಎರಡು ಶನಿ ಮಂತ್ರಗಳಲ್ಲಿ ಯಾವುದಾದರೊಂದು ಶನಿ ಮಂತ್ರವನ್ನು 108ಬಾರಿ ಪಠಿಸಬೇಕು.

    <span;>- ಓಂ ಶಂ ಶನೈಶ್ಚರಾಯ ನಮಃ

    <span;>- ಓಂ ಪ್ರಾಂ ಪ್ರೀಂ ಪ್ರೌಂ

    ಸಃ ಶನೈಶ್ಚರಾಯ ನಮಃ ಈ ಶನಿ ಮಂತ್ರವನ್ನು ನೀವು ಸರಿಯಾದ ವಿಧಿ – ವಿಧಾನಗಳ ಪ್ರಕಾರ ಪಠಿಸಬೇಕು. ಈ ಮಂತ್ರವನ್ನು ಪಠಿಸುವಾಗ ನೀವು ಕಪ್ಪು ಬಣ್ಣದ ಆಸನದ ಮೇಲೆ ಕುಳಿತು ಮಂತ್ರವನ್ನು ಪಠಿಸಬೇಕು. ಆಂಜನೇಯ ಸ್ವಾಮಿಯ ಅಥವಾ ಶನಿ ದೇವನ ಫೋಟೋ ಅಥವಾ ವಿಗ್ರಹವನ್ನು ಇಟ್ಟು ಅದರ ಮುಂದೆ ದೀಪವನ್ನು ಹಚ್ಚಿಟ್ಟು ನಂತರ ಈ ಶನಿ ಮಂತ್ರಗಳನ್ನು ಪಠಿಸಬೇಕು. ಇದರಿಂದಾಗಿ ಶನಿಯ ಕೆಟ್ಟ ದೃಷ್ಟಿಯು ಕಡಿಮೆಯಾಗುತ್ತದೆ. ನಿಮ್ಮ ಜೀವನವು ಸ್ಥಿರತೆ ಮತ್ತು ಪ್ರಗತಿಯಿಂದ ಕೂಡಿರುವಂತೆ ಈ ಮಂತ್ರ ಮಾಡುವುದು.

    ಮಂಗಳವಾರದ ದಿನದಂದು ಸಂಜೆ ಸಮಯದಲ್ಲಿ ನೀವು ನಿಮಗೆ ಹತ್ತಿರವಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಅಲ್ಲಿರುವ ಆಂಜನೇಯನಿಗೆ ಸಿಂಧೂರ ಮತ್ತು ಮಲ್ಲಿಗೆ ಎಣ್ಣೆಯನ್ನು ಅರ್ಪಿಸಿ. ಮಂಗಳವಾರದ ದಿನದಂದು ನಾವು ಆಂಜನೇಯ ಸ್ವಾಮಿಯನ್ನು ಪೂಜಿಸಿ ಈ ಎರಡು ವಸ್ತುಗಳನ್ನು ಆಂಜನೇಯ ಸ್ವಾಮಿಗೆ ಅರ್ಪಿಸುವುದರಿಂದ ಶನಿಗೆ ಸಂಬಂಧಿಸಿದ ಸಮಸ್ಯೆಗಳಾಗಿರಬಹುದು ಅಥವಾ ಶನಿ ದೋಷವಾಗಿರಬಹುದು ಶಾಂತವಾಗುವುದು ಎನ್ನುವ ನಂಬಿಕೆಯಿದೆ. ಯಾಕೆಂದರೆ ಸ್ವತಃ ಶನಿಯೇ ಹನುಮಂತನ ಭಕ್ತನಾಗಿದ್ದಾನೆ. ಹೀಗೆ ನೀವು ಹನುಮಂತನನ್ನು ಪೂಜಿಸುವುದರಿಂದ ನಿಮ್ಮ ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ.

    ಮಂಗಳವಾರದ ದಿನದಂದು ಸಂಜೆ ಸಮಯದಲ್ಲಿ ಆಂಜನೇಯ ಸ್ವಾಮಿಯನ್ನು ಪೂಜಿಸಿ ನಂತರ ಸಾಸಿವೆ ಎಣ್ಣೆಯಲ್ಲಿ ಕಪ್ಪು ಎಳ್ಳನ್ನು ಬೆರೆಸಿ ದೀಪದಲ್ಲಿ ಹಾಕಿ ಆ ದೀಪವನ್ನು ಅರಳಿ ಮರದ ಕೆಳಗೆ ಹಚ್ಚಿಡಿ. ಬಳಿಕ ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಶನಿದೇವನನ್ನು ಬೇಡಿಕೊಂಡು “ಓಂ ಶಂ ಶನೈಶ್ಚರಾಯ ನಮಃ” ಎಂಬ ಮಂತ್ರವನ್ನು ಪಠಿಸಿ. ಈ ಕೆಲಸವನ್ನು ನಾವು ಮಂಗಳವಾರದಂದು ಸಂಜೆ ಮಾಡುವುದರಿಂದ ಶನಿ ದೇವನಿಂದ ನಾವು ಎದುರಿಸುತ್ತಿರುವ ಅಶುಭ ಪರಿಣಾಮಗಳು ಕರಿಮೆಯಾಗುತ್ತದೆ. ಆರೋಗ್ಯದ ಸಮಸ್ಯೆಗಳಿಂದ, ಅಪಘಾತಗಳಿಂದ, ಕೋರ್ಟ್‌ ಹಾಗೂ ನ್ಯಾಯಾಲಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನಮಗೆ ರಕ್ಷಣೆಯನ್ನು ನೀಡುತ್ತದೆ. ಇದು ಜೀವನದಲ್ಲಿನ ಅಡೆತಡೆಗಳನ್ನು ತೆಗೆದುಹಾಕಿ ಪ್ರಗತಿಯನ್ನು ಸಾಧಿಸಲು  ಸಹಾಯ ಮಾಡುವುದು.

    ಶನಿಗೆ ಸಂಬಂಧಿಸಿದ ಸ್ತೋತ್ರ ಹಾಗೂ ಮಂತ್ರಗಳಲ್ಲಿ ಶನಿ ಚಾಲೀಸಾಕ್ಕೆ ಅಗಾಧವಾದ ಶಕ್ತಿಯಿದೆ. ಈ ಕಾರಣಕ್ಕಾಗಿ ನೀವು ಮಂಗಳವಾರದ ದಿನದಂದು ಸಂಜೆ ಯಾವುದಾದರೂ ಶುದ್ಧ ಹಾಗೂ ಪ್ರಶಾಂತವಾದ ಸ್ಥಳದಲ್ಲಿ ಕುಳಿತು ಶನಿ ಚಾಲೀಸಾವನ್ನು ಅಥವಾ ಶನಿ ಸ್ತೋತ್ರವನ್ನು ಪಠಿಸಬೇಕು. ಈ ಶನಿ ಚಾಲೀಸಾ ಅಥವಾ ಶನಿ ಸ್ತೋತ್ರವನ್ನು ಪಠಿಸುವ ಮುನ್ನ ದೀಪವನ್ನು ಬೆಳಗಿ, ಶನಿದೇವನನ್ನು ಧ್ಯಾನಿಸಿ. ಈ ರೀತಿ ನೀವು ಶನಿ ಚಾಲೀಸಾವನ್ನು ಪಠಿಸುವುದರಿಂದ ಜೀವನದ ಸಂಕಷ್ಟಗಳೆಲ್ಲಾ ಪರಿಹಾರವಾಗುವುದು. ಶನಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ದೊರೆತು ಮಾನಸಿಕ ಶಾಂತಿಯನ್ನು ಪಡೆಯುವರು.

    ಮಂಡ್ಯ: ಬಾಲಕಿ ಎಳೆದೊಯ್ದಿದ್ದ ಮೈಕ್ರೋ ಸಿಬ್ಬಂದಿ ಅರೆಸ್ಟ್!

    ಮಂಗಳವಾರದ ದಿನದಂದು ಸಂಜೆ ಸಮಯದಲ್ಲಿ ನೀವು ಕಪ್ಪು ಬಣ್ಣದ ಹಸು ಅಥವಾ ಕಪ್ಪು ಬಣ್ಣದ ನಾಯಿಗೆ ತಿನ್ನಲು ರೊಟ್ಟಿಯನ್ನು ನೀಡಬೇಕು. ಒಂದು ವೇಳೆ ನೀವು ಕಪ್ಪು ಬಣ್ಣದ ಹಸುವಿಗೆ ರೊಟ್ಟಿಯನ್ನು ನೀಡುತ್ತಿದ್ದರೆ, ರೊಟ್ಟಿಯೊಂದಿಗೆ ಬೆಲ್ಲವನ್ನಿಟ್ಟು ನೀಡಬೇಕು. ಅದೇ ಕಪ್ಪು ಬಣ್ಣದ ನಾಯಿಗೆ ರೊಟ್ಟಿಯನ್ನು ನೀಡುತ್ತಿದ್ದರೆ ಅದಕ್ಕೆ ಎಣ್ಣೆಯನ್ನು ಹಚ್ಚಿ ನೀಡಬೇಕು. ಯಾಕೆಂದರೆ, ಶನಿಯು ಕಪ್ಪು ಬಣ್ಣದ ಪ್ರಾಣಿಗಳನ್ನು ಇಷ್ಟಪಡುತ್ತಾನೆ. ಅವುಗಳನ್ನು ನಾವು ಪೋಷಣೆ ಮಾಡುವುದರಿಂದ ಶನಿಯು ನಮ್ಮನ್ನು ಎಲ್ಲಾ ರೀತಿಯ ದುಃಖ, ಕಷ್ಟಗಳಿಂದ ರಕ್ಷಿಸುತ್ತಾನೆ ಎಂಬ ನಂಬಿಕೆ.

    Demo
    Share. Facebook Twitter LinkedIn Email WhatsApp

    Related Posts

    ಈ ರಾಶಿಯ ಮಾಜಿ ಸಂಗಾತಿ ಹಠಾತ್ ಭೇಟಿಯಾಗುವರು: ಮಂಗಳವಾರದ ರಾಶಿ ಭವಿಷ್ಯ 24 ಜೂನ್ 2025

    June 24, 2025

    ಚಿನ್ನ ವಂಚಕಿ ಐಶ್ವರ್ಯಾ ಗೌಡಗೆ ಭಾರೀ ಸಂಕಷ್ಟ: ED ಇಂದ ಆಸ್ತಿ ಮುಟ್ಟುಗೋಲು!

    June 23, 2025

    ಇ.ಡಿ ಫೇಸ್ ಮಾಡೋಕೆ ನಮ್ಮ ಕುಟುಂಬ ರೆಡಿ: DCM ಡಿಕೆ ಶಿವಕುಮಾರ್!

    June 23, 2025

    ಬೆಳಗ್ಗೆ ಎದ್ದ ಕೂಡಲೇ ತಲೆನೋವು ಬರುತ್ತಾ!? ಹಾಗಿದ್ರೆ ರಾತ್ರಿ ಮಾಡುವ ಈ ತಪ್ಪು ಕಾರಣ!

    June 23, 2025

    ಇಡಿ ತನಿಖೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ: ಡಿಕೆ ಸುರೇಶ್!

    June 23, 2025

    ನಿಮಗಿದು ಗೊತ್ತಾ!? ಕರಿಬೇವಿನ ಎಲೆಗಳನ್ನು ನೆನೆಸಿ ನೀರು ಕುಡಿಯುವುದರಿಂದ, ಸಿಗುವ ಆರೋಗ್ಯ ಬೆನಿಫಿಟ್ ಎಷ್ಟು ಗೊತ್ತಾ!?

    June 23, 2025

    ಒಂದೇ ತಿಂಗಳಲ್ಲಿ ಹೊಟ್ಟೆಯ ಕೊಬ್ಬು ಕರಗಿಸಬೇಕಾ? ಹಾಗಿದ್ರೆ ಏಲಕ್ಕಿಯನ್ನು ಹೀಗೆ ತಿನ್ನಿರಿ!

    June 23, 2025

    Milk For Health: ನೀವು ಜಾಸ್ತಿ ಹಾಲು ಕುಡಿತೀರಾ? ಹಾಗಾದ್ರೆ ಈ ವಿಚಾರ ಮೊದ್ಲು ತಿಳಿದುಕೊಳ್ಳಿ!

    June 23, 2025

    BCCI New Rules: ಬೆಂಗಳೂರು ಕಾಲ್ತುಳಿತ ಕೇಸ್: ಸಂಭ್ರಮಾಚರಣೆಗಳಿಗೆ ಕಠಿಣ ನಿಯಮ ಜಾರಿಗೊಳಿಸಿದ ಬಿಸಿಸಿಐ

    June 23, 2025

    ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ಕೊಡಬೇಕು: ಛಲವಾದಿ ನಾರಾಯಣಸ್ವಾಮಿ

    June 23, 2025

    ಸಿಎಂ ಅವರೇ ಬಿ.ಆರ್.ಪಾಟೀಲ್ ಅವರ ಬಾಯಿ ಮುಚ್ಚಿಸುವ ಆತಂಕ ನಮಗಿದೆ: ಬಿಎಸ್ ಯಡಿಯೂರಪ್ಪ

    June 23, 2025

    ED ನನ್ನ ಮೇಲೂ ಕೇಸ್ ಹಾಕಿತ್ತು. ಆಮೇಲೆ ಏನಾಯಿತು?. ಯಾರೂ ನನ್ನ ರಕ್ಷಣೆಗೆ ಬಂದಿರಲಿಲ್ಲ: ಡಿ. ಕೆ. ಶಿವಕುಮಾರ್

    June 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.