ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅದರಲ್ಲೂ ಕುಂದಗೋಳ ತಾಲೂಕಿನಲ್ಲಿ ಮುಂಗಾರು ಮಳೆ ವಾಡಿಕೆ ಗಿಂತ ಹೆಚ್ಚು ಮಳೆ ಸುರಿದ ಪರಿಣಾಮವಾಗಿ ಬಿತ್ತನೆ ಮಾಡಿದ ಬೆಳೆಗಳು ಮೊಳಕೆ ಒಡೆಯುವ ಮುನ್ನವೇ ಕೆಲವೊಂದು ಬೀಜಗಳು ನಾಶವಾಗಿದ್ದು ಕೆಲವೊಂದು ಬೀಜಗಳು ಮಾತ್ರ ಅಲ್ಲಲ್ಲಿ ಹುಟ್ಟಿಕೊಂಡಿದೆ ಅದು ಸರಿಯಾಗಿ ಹುಟ್ಟದೆ ಕಾರಣ ರೈತರು ಮರು ಬಿತ್ತನೆ ಮಾಡಲು ತಾವೇ ಬಿತ್ತಿದ ಬೆಳೆಗಳನ್ನು ಹರಗುತ್ತಿದ್ದಾರೆ .
ಹೌದು, ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಯರಗುಪ್ಪಿ ಮುಳ್ಳೊಳ್ಳಿ ಚಾಕಲೇಬ್ಬಿ ಇನ್ನಿತರ ಗ್ರಾಮಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳನ್ನು ಹರಗುವ ಮೂಲಕ ಮತ್ತೆ ಬಿತ್ತನೆ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ ಈಗಾಗಲೇ ಬೀಜ ಗೊಬ್ಬರ ಗಳನ್ನು ಹಾಳು ಮಾಡಿಕೊಂಡ ರೈತ ಕಣ್ಣೀರಲ್ಲಿ ಕೈ ತೊಳೆದುಕೊಳ್ಳುವಂತಾಗಿದೆ ಈಗಾಗಲೇ ಪ್ರತಿ ಎಕರೆಗೆ 8,000, ರೂಪಾಯಿಗಳನ್ನು ಖರ್ಚು ಮಾಡಿ ಬಿತ್ತನೆ ಕಾರ್ಯ ಮಾಡಿದ್ದಾರೆ.
ಮತ್ತೆ ರೈತನಿಗೆ ಗಾಯದ ಮೇಲೆ ವರುಣ ಆರ್ಭಟಕ್ಕೆ ಬರೆ ಎಳೆದಂತಾಗಿದೆ ಅದರಲ್ಲಿ ಜಿಂಕೆಗಳು ಕಾಟದಿಂದ ಅಳುವುದು ಉಳಿದ ಬೆಳೆಗಳನ್ನು ಚಿಗರೆಗಳು ತಿನ್ನುತ್ತಾ ಜಮೀನುಗಳಲ್ಲಿ ಅತ್ತಿಂದ ತಿಂದಿತ್ತ ಓಡಾಡಿ ಬೆಳೆಗಳನ್ನು ಹಾಳು ಮಾಡುತ್ತಿದ್ದು ಕೂಡಲೇ ಸರ್ಕಾರವು ಜಿಂಕೆಗಳನ್ನು ಹಿಡಿದು ಅರಣ್ಯಕ್ಕೆ ಬಿಡು ಅಂತ ಕಾರ್ಯ ಮಾಡಬೇಕಾಗಿದೆ ನೊಂದ ರೈತರಿಗೆ ಸರ್ಕಾರವು ಐದನೂರು ಕೋಟಿ ರೂಪಾಯಿ ಗಳನ್ನು ಧಾರವಾಡ ಜಿಲ್ಲೆಗೆ ಬಿಡುಗಡೆ ಮಾಡಬೇಕು ಬೆಳೆ ಕಳೆದುಕೊಂಡ ರೈತನಿಗೆ ಪರಿಹಾರ ಒದಗಿಸಿ ಕೊಡಬೇಕು ಬೆಣ್ಣೆ ಹಳ್ಳ ಮಾತ್ರವಲ್ಲದೆ ಬೆಣ್ಣೆ ಹಳ್ಳದ ಸುತ್ತಮುತ್ತ ಇರುವ ಉಪ ಹಳ್ಳಗಳು,ಸ ಹ,ಹೂಳೆತ್ತುವ ಮತ್ತು ಮಳೆಯಿಂದ ಹಾನಿಗೊಳಗಾದ ರೈತರ ಜಮೀನುಗಳಿಗೆ ರಸ್ತೆ ಬ್ರಿಜ್ ನಿರ್ಮಾಣ ಕಾರ್ಯ ಮಾಡಬೇಕಾಗಿದೆ ಎಂದು ತಾಲೂಕಿನ ರೈತರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಈಗಾಗಲೇ ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರಿಗೆ ರತ್ನ ಭಾರತ ರೈತ ಸಮಾಜ ವತಿಯಿಂದ ಮನವಿ ಸಲ್ಲಿಸಲಾಯಿತು ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡ ಬಸನಗೌಡ ತಾಲೂಕ ಅಧ್ಯಕ್ಷ ಬಸವರಾಜ ಯೋಗಪ್ಪನವರ ರಾಜು ಮಲ್ಲಿಗವಾಡ ಚನ್ನಬಸಪ್ಪ ಸಿದ್ದುನವರ ಚಂದ್ರಶೇಖರ ಹತ್ತಿ ಭೀಮಪ್ಪ ಪೂಜಾರ ನಾಗಪ್ಪ ಸಿದ್ದುಣ್ಣವರ ಇನ್ನಿತರು ಮನವಿ ಸಲ್ಲಿಸಿದ್ದಾರೆ.ಆದರೆ ಸರಕಾರ ಹಾಗೂ ಕೃಷಿ ಇಲಾಖೆ ರೈತರ ಸಹಾಯಕ್ಕೆ ಬರಬಹುದಾ ಅಂತಾ ಅನ್ನದಾತರು ಕಾಯ್ತಾ ಇದ್ದಾರೆ.