ನವಲಗುಂದಃ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಶ್ರೀ ಅಜಾತನಾಗಲಿಂಗ ಸ್ವಾಮಿ ಸುಕ್ಷೇತ್ರವಾದ ಹಲವಾರು ಲೀಲೆ, ಪವಾಡಗಳಿಂದ ಭಕ್ತರ ಮನದಲ್ಲಿ ಶಾಶ್ವತವಾಗಿ ಉಳಿದುಕೊಂಡ ಮಹಾತ್ಮ ಶ್ರೀ ಅಜಾತ ನಾಗಲಿಂಗ ಸ್ವಾಮೀಗಳು ಒಬ್ಬರಾಗಿದ್ದಾರೆ. ಸ್ಥಳೀಯ ನಾಗಲಿಂಗ ಸ್ವಾಮಿ ಮಠ ಹಿಂದೂಗಳ ಮಠವಾದರೂ ಇಲ್ಲಿ ಶ್ರೀ ಅಜಾತ ನಾಗಲಿಂಗಸ್ವಾಮಿ ಗದ್ದುಗೆ, ಮೌನೇಶ್ವರ ಗದ್ದುಗೆ, ಕ್ರೆಸ್ತರ ಧರ್ಮಗ್ರಂಥ, ಬೈಬಲ್ ಹಾಗೂ ಮುಸ್ಲಿಂ ಪಂಜಾಗಳು ದಿನನಿತ್ಯ ಪೂಜೆಸಲ್ಪಡುತ್ತವೆ.
ಶ್ರೀ ನಾಗಲಿಂಗಜ್ಜನ ಪವಾಡಗಳು ಃ– ಶ್ರೀ ಅಜಾತ ನಾಗಲಿಂಗ ಮಹಾಸ್ವಾಮೀಜಿಗಳು ರಾಜ್ಯದಲ್ಲಿ ಸಂಚರಿಸುತ್ತಾ ನವಲಗುಂದಕ್ಕೆ ಆಗಮಿಸಿದಾಗ ಅಜ್ಜನವರು ಇಲ್ಲಿಯ ಮೌನೇಶ್ವರನ ಗುಡಿಯಲ್ಲಿ ಜ್ವರಪೀಡಿತರಾಗಿ ಮಲಗಿದಾಗ ಆರೈಕೆ ಮಾಡಲು ಬಂದ ಕನ್ಯಾ ಸಮಗಾರ ಭೀಮವ್ವನ ಏದೆ ಹಾಲನ್ನು ಕುಡಿದು ಮಹಿಮೆಯನ್ನು ಮೆರೆದರು. ಭೀಮವ್ವನ ಭಕ್ತಿಯನ್ನು ಪರೀಕ್ಷ್ಷಿಸಲು ಬೀಮ್ಮವ್ವನಿಗೆ ಬೆತ್ತಲೆಯಾಗಿ ಪೇಟೆಗೆ ಹೋಗಿ ಹಣ್ಣು-ಹಂಬಲ ತರಲು ಆಜ್ಞಾಪಿಸಿದರು. ಪರಮಭಕ್ತೆ ಭೀಮವ್ವ ನಾಗಲಿಂಗಸ್ವಾಮಿಗಳ ಹೇಳಿದಂತೆ ಪೇಟೆಗೆ ಬೆತ್ತಲೇಯಾಗಿಯೇ ಹೋದಳು, ಆದರೆ ನೋಡುವವರ ಕಣ್ಣಿಗೆ ಮಾತ್ರ ಆಕೆ ಜರ್ದಾರಿ ಪೀತಾಂಬರ ಧರಿಸಿದಂತೆ ಕಂಡು ಬಂದು ಅಂದೊಂದು ಪವಾಡವಾಗಿ ಭಕ್ತರು ಆಶ್ಚರ್ಯಚಕಿತರಾದರು.
ಬ್ರೀಟಿಷರ ಕಾಲದಲ್ಲಿ ತಮ್ಮ ಬೈಬಲ್ ಪ್ರಚಾರ ಮಾಡಲು ಮುಷ್ಟೀಗಿರಿ ಕಾಳಪ್ಪನಿಗೆ ನೀಡಿದ್ದರು. ಗ್ರಾಮದೇವತೆ ಗುಡಿಯಲ್ಲಿ ಬೈಬಲ್ ಓದುತ್ತಿದ್ದಾಗ ನಾಗಲಿಂಗ ಸ್ವಾಮಿಗಳು ಆಗಮಿಸಿದ್ದನ್ನು ನೋಡಿ ಬೈಯುದ್ದಾರೆಂದು ಬೈಬಲ್ನ್ನು ಮುಚ್ಚಿಟ್ಟಿದ್ದರು. ಬೈಬಲ್ನ್ನು ಅಜ್ಜನವರು ತರೆಸಿಕೊಂಡು ಅದಕ್ಕೆ ರಂದ್ರ ಹಾಕಿ ಆ ರಂದ್ರ ಮುಚ್ಚಿದಾಗ ಮತ್ತೆ ಆವತರಿಸಿ ಬರುವೆನೆಂದು ಹೇಳಿದ್ದಾರೆ. ಇವತ್ತಿಗೂ ಆ ಬೈಬಲ್ ಶ್ರೀ ಮಠದಲ್ಲಿ ಪೂಜೆಯಾಗುತ್ತದೆ. ಸಾರ್ವಜನಿಕರಿಗೆ ಬೈಬಲ್ ನೋಡಬೇಕೆಂದರೆ ಗದ್ದುಗೆ ಪೂಜೆಯ ಮುಂಚೆತವಾಗಿ ನೋಡಲು ಲಭ್ಯವಿದೆ.
ಹೊಸಳ್ಳಿ ಬೂದಿಸ್ವಾಮಿಗಳು, ಗರಗದ ಮಡಿವಾಳಜ್ಜನವರು, ಹುಬ್ಬಳ್ಳಿಯ ಸಿದ್ದಾರೂಢರು, ಶಿಶುನಾಳ ಶರೀಪಸಾಹೇಬರು, ಮೊದಲಾದ ಶರಣರು ಹಾಗೂ ಸಂತ ಮಹಾಪುರಷರೂಡಗೂಡಿ ಸಾಕಷ್ಟು ಪವಾಡಗಳನ್ನು ಮಾಡಿದ್ದು ಇತಿಹಾಸದಲ್ಲಿ ಕೇಳಿ ಬರುತ್ತವೆ. ಮಠದ ಆವರಣದಲ್ಲಿ ಗವಿ ಇದ್ದು ಪವಾಡ ಪುರುಷ ನಾಗಲಿಂಗ ಅಜ್ಜನವರು ಸುರಂಗ ಮಾರ್ಗವಾಗಿ ಗವಿಯಲ್ಲಿ ಸಂಚರಿಸಿ ಸ್ನಾನ ಧಾರ್ಮಿಕ ಪೂಜೆಗಳನ್ನು ಕೈಗೊಳ್ಳುತ್ತಿದ್ದರು ಎಂಬ ಇತಿಹಾಸದ ಪುರಾವೆಗಳು ಶ್ರೀ ಮಠದಲ್ಲಿ ಲಭ್ಯವಿರುತ್ತವೆ.
ಇಂಥ ಹಲವಾರು ಲೀಲೆಗಳನ್ನು ಮಾಡಿದ ಶ್ರೀ ನಾಗಲಿಂಗ ಅಜ್ಜನವರು 1881 ರಲ್ಲಿ ಜೀವಂತ ಸಮಾಧಿ ಹೊಂದಿದರು. ಶ್ರೀ ನಾಗಲಿಂಗ ಅಜ್ಜನವರ ಪುಣ್ಯಸ್ಥಳಕ್ಕೆ ರಾಜ್ಯ ಹೊರರಾಜ್ಯದಿಂದ ವರ್ಷವಿಡೆ ಭಕ್ತರು ಆಗಮಿಸಿ ದರ್ಶನ ಪಡೆದು ತಮ್ಮ ಹರಕೆ ತಿರಿಸುತ್ತಾ ಬಂದಿರುವುದು ವಿಶೇಷ. ಅಜ್ಜನನ್ನು ನೆನೆದು ಬಂದವರಿಗೆ ಎಂದು ಕೈಬಿಡದೆ ಕಾಪಾಡಿರುತ್ತಾನೆ. ಶ್ರೀ ನಾಗಲಿಂಗಜ್ಜನ ಅಂಗಾರ ಊರತುಂಬಾ ಬಂಗಾರ ಎಂಬ ಭಕ್ತರ ಘೋಷಣೆಗಳು ಸದಾ ಕಂಡು ಬರುತ್ತವೆ.
ಒಟ್ಟಾರೆ ಧರ್ಮ,ಸಂಸ್ಕ್ರತಿ,ಕಲೆಗಳನ್ನೊಳಗೊಂಡ ಶ್ರೀ ನಾಗಲಿಂಗಜ್ಜನ ಕ್ಷೇತ್ರವಾಗಿ ರಾಜ್ಯದ ಗಮನ ಸೆಳೆದಿದೆ. ಅಂತಾ ಮಹಾಮಹಿಮನ ಆರಾಧನಾ ಮಹೋತ್ಸವ ಲಕ್ಷಾಂತರ ಜನರಿಗೆ ಭಕ್ತಿ ಶ್ರದ್ದೆಗಳ ಸಮ್ಮೇಳನವಾಗಿದೆ. ಶ್ರೀಗಳ ಸಂಕಲ್ಪದಂತೆ ಇಂದಿನ ಪೀಠಾಧಿಪತಿಯಾದ ಶ್ರೀ ವೀರಯ್ಯಾ ಸ್ವಾಮೀಜಿ ಶಕ್ತಿ ನೀಡಿ ಕೇವಲ ಧಾರ್ಮಿಕ ಕಾರ್ಯಕಲಾಪಗಳಿಗೆ ಮಾತ್ರ ಮಠವನ್ನು ಸೀಮಿತಗೊಳಿಸದೇ ಶೈಕ್ಷಣಿಕ-ಸಾಂಸ್ಕ್ರತಿಕ-ಸಾಮಾಜಿಕವಾಗಿ ಅಭಿವ್ರದ್ದಿಯಲ್ಲಿ ಸಕ್ರೀಯರಾಗಿ ಕಾರ್ಯಪ್ರವೃತ್ತರಾಗಿ ಧಾರ್ಮಿಕ ಕ್ಷೇತ್ರವನ್ನಾಗಿ ಪುಷ್ಠಿ ಗೊಳಿಸುತ್ತಿದ್ದಾರೆ.
ಹಿಂದಿನ ಶ್ರೀಗಳ ಪರಂಪರೆಯನ್ನು ಪರಿಪಾಲಿಸುತ್ತಾ ಬಂದಿರುತ್ತಾರೆ. ಪ್ರತಿವರ್ಷದಂತೆ ಈ ವರ್ಷ ಜೂ-29 ರಂದು 144 ನೇ ಆರಾಧನಾ ಮಹೋತ್ಸವ ಹಾಗೂ ಮಜಾರ ಪೂಜೆ ನೆರವೇರಲಿದೆ. ಜೂ-30 ರಂದು ಪಲ್ಲಕ್ಕಿ ಹಾಗೂ ಮೇಣಿ ಮಹೋತ್ಸವ ಸಾವಿರರಾರು ಸಂಖ್ಯೆಯಲ್ಲಿ ವಿವಿಧ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ.