ಬೆಂಗಳೂರು: ದೇಶಾದ್ಯಂತ 11ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಉತ್ಸಾಹದಿಂದ ಆಚರಿಸಲಾಗಿತ್ತು.
ಅದರಂತೆ ಅಂತರಾಷ್ಟ್ರೀಯ ಯೋಗ ದಿನದಂದು ಸಂಜಯನಗರದ ಡಾಲರ್ಸ್ ಕಾಲೋನಿಯಲ್ಲಿರುವ ಕುವೆಂಪು ಮೈದಾನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಾಜಯೋಗಿನಿ ಬಿಕೆ ಸೋನಿ ಬೆಹನ್ ಜಿ ನೇತೃತ್ವದಲ್ಲಿ ಸಾಮೂಹಿಕ ಯೋಗದ ಹಾಗೂ ಧ್ಯಾನದ ಅಭ್ಯಾಸ ಮಾಡಲಾಯಿತು.
ಇನ್ನೂ ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆನಂದ್ ಎಂ (ಉದಾ. ಬೆಂಗಳೂರು ಉಪ ಮೇಯರ್) ನಾಡೋಜ ಶ್ರೀ. ಎಸ್.ಷಡಕ್ಷರಿ (ಅಧ್ಯಕ್ಷರು, ರಮಣಶ್ರೀ ಸಮೂಹ ಸಂಸ್ಥೆಗಳು, ಬೆಂಗಳೂರು)
ಇನ್ನೂ ಗೌರವ ಅತಿಥಿಗಳಾಗಿ ಡಾ.ಆರ್.ಚಂದ್ರಶೇಖರ್ ( ವ್ಯವಸ್ಥಾಪಕ ನಿರ್ದೇಶಕರು, ಆರ್ಎಂವಿ ಆಸ್ಪತ್ರೆ, ಸಂಜಯ್ ನಗರ, ಬೆಂಗಳೂರು) ಡಾ. ಸಾಯಿಕೃಷ್ಣ ಬಿ ನಾಯ್ಡು ( ನಿರ್ದೇಶಕರು ಮೂಳೆ ಮತ್ತು ಜಂಟಿ ಶಸ್ತ್ರಚಿಕಿತ್ಸೆ, ವಿಕ್ರಮ್ ಔರಾ ಆಸ್ಪತ್ರೆ ಮತ್ತು ಮಣಿಪಾಲ್ ಆಸ್ಪತ್ರೆ)
ಶ್ರೀ. ಶ್ರೀನಿವಾಸ ರಾಜು ( ಅಧ್ಯಕ್ಷರು, ಶ್ರೀ ಕೃಷ್ಣದೇವರಾಯ ಎಜುಕೇಶನಲ್ ಟ್ರಸ್ಟ್, ಬೆಂಗಳೂರು) ರಾಜಯೋಗಿ ಬಿ ಕೆ ಸುರೇಂದ್ರನ್ ಭಾಯಿ ಜಿ ( ಪ್ರಾದೇಶಿಕ ಸಂಯೋಜಕರು, ಶೈಕ್ಷಣಿಕ ವಿಭಾಗ, RE&RF, ಮೌಂಟ್ ಅಬು) ಶ್ರೀಮತಿ. ನಂದಿತಾ ಸುಬ್ಬರಾವ್ ( ಸಮಾಜ ಸೇವಕ ಮತ್ತು ಮಾಜಿ ವ್ಯಾಪಾರ ಪ್ರಕ್ರಿಯೆ/ ಐಟಿ ವೃತ್ತಿಪರ) ಸೇರಿದಂತೆ ವಿವಿಧ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.