ಹುಬ್ಬಳ್ಳಿ: ಮಂಟೂರ ರಸ್ತೆಯಲ್ಲಿರುವ ಕಲಬುರ್ಗಿ ಮಠದಲ್ಲಿ ಪರಮಪೂಜ್ಯ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳ ಐವತ್ತು ಮೂರನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಹಾಗೂ ನೂತನ ಸ್ವಾಮಿಗಳಾದ ಪೂಜ್ಯಶ್ರೀ ಚರಲಿಂಗ ಸ್ವಾಮಿಗಳ ಪುರ ಪ್ರವೇಶ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
3000 ಮಠದ ಜಗದ್ಗುರುಗಳು ಸಾನಿಧ್ಯವಹಿಸಿ ಕಲಬುರ್ಗಿ ಮಠ ಬಹಳ ಪುರಾತನವಾಗಿರತಕ್ಕಂಥ ಮಠವಾಗಿದ್ದು ಈ ಮಠ ಸ್ವಾಮಿಗಳಿಲ್ಲದೆ ಬಹಳ ದಿನದಿಂದ ಕಾಲಿ ಇದ್ದು ಇದಕ್ಕೆ ನೂತನ ಶ್ರೀಗಳು ನೇಮಕಗೊಂಡಿರುತ್ತಾರೆ ಇವರ ನೇತೃತ್ವದಲ್ಲಿ ಮಠದ ಅಭಿವೃದ್ಧಿ ಕಾರ್ಯಗಳು ಮಠದ ವೈಭವ ಮೊದಲಿನಂತೆ ಬೆಳಗಲಿ ಈಗಿರುವ ಶ್ರೀಗಳು ಹೆಚ್ಚಿಗೆ ಮಠದಲ್ಲಿ ಇದ್ದು ಮಠದಲ್ಲಿ ಧಾರ್ಮಿಕ ಆಧ್ಯಾತ್ಮಿಕ ಹಾಗೂ ಪೂಜಾ ಕಾರ್ಯಗಳನ್ನು ಮಾಡುತ್ತಾ ಈ ಮತವನ್ನು ಬೆಳೆಸಬೇಕೆಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಬೆಳಿಗ್ಗೆ ಎದ್ದಾಕ್ಷಣ ಈ ರೀತಿಯ ಲಕ್ಷಣ ಕಂಡುಬಂದ್ರೆ ಇದು ಥೈರಾಯ್ಡ್ ಸಮಸ್ಯೆ ಎಂದರ್ಥ
ಮತ್ತೋರ್ವ ಪೂಜ್ಯರಾದ ಇಲಕಲ್ ಚಿತ್ತರಗಿ ಮಠದ ಗುರುಮಂತ ಸ್ವಾಮಿಗಳು ಈ ಮಠದ ಪರಂಪರೆ ಹಾಗೂ ನಡೆದ ಬಂದ ದಾರಿಯನ್ನು ವಿಸ್ತಾರವಾಗಿ ತಿಳಿಸಿದರು ಮಠಗಳಿಗೆ ಭಕ್ತರ ಸಹಕಾರ ಅಗತ್ಯ ಎಂದು ತಿಳಿಸಿದರು ರುದ್ರಾಕ್ಷಿ ಮಠ ದ ಬಸವಲಿಂಗ ಶ್ರೀಗಳು ಎರಡತ್ತಿನ ಮಠದ ಸಿದ್ದಲಿಂಗ ಶ್ರೀಗಳು ಬಿಜ್ಜಗಲ್ಲ ಶ್ರೀಗಳು ಮುಂತಾದವರು ಸಾನಿಧ್ಯ ವಹಿಸಿದ್ದರು ಅತಿಥಿಗಳಾಗಿ ಶ್ರೀ ಶರಣಪ್ಪ ಕೊಟ್ಟಿಗಿ ಶ್ರೀ ರಮೇಶ್ ಮಹದೇವಪ್ಪನವರ್ ಭಾಗವಹಿಸಿದ್ದರು ಸಭೆಯ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಸಾಹುಕಾರ್ ವಹಿಸಿ ಪ್ರಾಸ್ತಾವಕವಾಗಿ ಸಮಾರಂಭದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಕಲಬುರ್ಗಿಯ ಶಿವಶರಣ ಹೊಸ ಗೌಡ ಹಾಗೂ ಡಾಕ್ಟರ್ ಶಂಬು ಹೆಗಡಾಳ ಹಾಗೂ ಶ್ರೀಶೈಲ ಶಿವಮಠ, ಮಹಾಂತೇಶ ಗಿರಿಮಠ ಅಶೋಕ್ ಸುಳ್ಳದ್, ಸ.ವಿ ಬಳ್ಳಾರಿ ವಕೀಲರು ,ಶಂಭು ಲಕ್ಷ್ಮೆಶ್ವರಠ ಮುರುಗೇಶ್ ಎಕ್ಲಾಸ್ ಪುರ ,ಕೃಷ್ಣಪ್ಪ ಹಲಗೂರು ಗುರುಸಿದ್ದಪ್ಪ ಹಳ ವುರ ಮುಂತಾದವರು ಭಾಗವಹಿಸಿ ನೂತನ ಶ್ರೀಗಳಾದ ಚರಲಿಂಗ ಸ್ವಾಮಿಗಳಿಗೆ ಮಠಕ್ಕೆ ಭಕ್ತಿ ಪೂರ್ವಕವಾಗಿ ಸ್ವಾಗತವನ್ನು,
ಮಾಡಿ ಮಠದ ಸದ್ಭಕ್ತರಿಂದ ಗುರುವಂದನ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು ಚರಲಿಂಗ ಶ್ರೀಗಳು ನಾನು ಮಠದಲ್ಲಿ ಇದ್ದು ಮುಂದಿನ ದಿನಗಳಲ್ಲಿ ಮಠವನ್ನ ಬೆಳೆಸುತ್ತೇನೆ ಎಂದು ನಡೆದ ಭಕ್ತರ ಸಮ್ಮುಖದಲ್ಲಿ ಘೋಷಿಸಿದರು ಕಾರ್ಯಕ್ರಮವನ್ನು ಧೋಟಿಯಾಳದ ಚಂದ್ರಶೇಖರ ದೇವರು ನಡೆಸಿಕೊಟ್ಟರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಲಿಂಗರಾಜ್ ಅಂಗಡಿಯವರು ಸ್ವಾಗತ ಭಾಷಣ ಮಾಡಿದರು ಹಾಗೂ ಡಾಕ್ಟರ್ ಜ್ಯೋತಿ ಲಕ್ಷ್ಮಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು ಸಂತೋಷ್ ಲೂತಿಮಠ್ ವಂದಿಸಿದರು