ಹಾವೇರಿ: ಕಂಟ್ರಾಕ್ಟರ್ ಶಿವಾನಂದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿ ಬಂದಿದೆ. ಹಾನಗಲ್ಲಿನಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು ಕೇಳಿದ್ದು, ಕೊಲೆ ಆರೋಪಿಗಳಿಬ್ಬರ ಮೇಲೆ ಫೈರಿಂಗ್ ಮಾಡಲಾಗಿದೆ.
ಶಿರಾಡಿಘಾಟ್ ನಲ್ಲಿ ಭೂಕುಸಿತ: ವಾಹನ ಸಂಚಾರ ಬಂದ್.. ಬದಲಿ ಮಾರ್ಗ ಇಲ್ಲಿದೆ!
ಅಶ್ರಫ್ ಮತ್ತು ನಾಗರಾಜ ಸವದತ್ತಿ ಗುಂಡಿನ ದಾಳಿಗೆ ಒಳಗಾದವರು. ರಾಜ್ಯಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಶಿಗ್ಗಾಂವಿಯ ಗುತ್ತಿಗೆದಾರನ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕರೆ ತರುತ್ತಿದ್ದ ಸಂದರ್ಭದಲ್ಲಿ ಕೊಂಡೋಜಿ ಬಳಿ ಪೊಲೀಸರ ಮೇಲೆ ಆರೋಪಿಗಳು ದಾಳಿ ಮಾಡಿದ್ದಾರೆ.
ಈ ವೇಳೆ ಆತ್ಮರಕ್ಷಣೆಗಾಗಿ ಕೊಲೆ ಆರೋಪಿಗಳ ಮೇಲೆ ಹಾನಗಲ್ ಪಿಎಸ್ಐ ಸಂಪತ್ ಆನಿಕಿವಿ, ಆಡೂರು ಪಿಎಸ್ಐ ಶರಣಪ್ಪ ಹಂಡರಗಲ್ ಫೈರಿಂಗ್ ಮಾಡಿ ಬಂಧಿಸಿದ್ದಾರೆ.
ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶಕುಮಾರ್ ಹೇಳಿದ್ದೇನು?
ದಿ.24 ರಂದು ಶಿಗ್ಗಾವಿ ಪಟ್ಟಣದಲ್ಲಿ ಗುತ್ತಿಗೆದಾರ ಶಿವಾನಂದ ಎಂಬುವವರ ಕೊಲೆ ನಡೆದಿತ್ತು. ಆಸ್ತಿ ವಿವಾದದ ಹಿನ್ನೆಲೆ ನಾಗರಾಜ್ ಅಂಡ್ ಟೀಮ್ ಶಿವಾನಂದ ಕೊಲೆ ಮಾಡಲಾಗಿತ್ತು..ಘಟನೆ ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಶುರು ಮಾಡಿದ್ದೀವಿ.
ಸುಮಾರು ನಾಲ್ಕು ಪ್ರತ್ಯೇಕ ತಂಡಗಳಾಗಿ ಆರೋಪಿಗಳ ಬಂಧನಕ್ಕೆ ಹುಡುಕಾಟ ನಡೆಸಿದ್ದೀವಿ. ಬೇರೆ ರಾಜ್ಯಗಳಲ್ಲಿ ಆರೋಪಿಗಳಿರೋ ಬಗ್ಗೆ ಮಾಹಿತಿತ್ತು. ಹೀಗಾಗಿ ಬೆಳಗ್ಗೆ ಒಟ್ಟು 5 ಜನ ಆರೋಪಿಗಳ ಬಂಧನವಾಗಿತ್ತು. ಅದರಲ್ಲಿ ನಾಗರಾಜ್ ಮತ್ತು ಆಶ್ರಪ್ ಇಬ್ಬರೂ ಕೊಂಡೋಜಿ ಬಳಿ ಬಂಧನವಾಗಿದ್ರು. ಈ ವೇಳೆ ಶಿಗ್ಗಾವಿ ಟೌನ್ ಸಿಪಿಐ ಸತ್ಯಪ್ಪ & ಹಾನಗಲ್ ಪಿ ಎಸ್ ಐ ಸಂಪತ್ ಮೇಲೆ ಹಲ್ಲೆಗೆ ಯತ್ನಿಸಿದ್ರು. ಹೀಗಾಗಿ ಜೀವನ ರಕ್ಷಣೆಗಾಗಿ ಇಬ್ಬರೂ ಮೇಲೆ ಪೈರಿಂಗ್ ಮಾಡಲಾಗಿದೆ..
ಘಟನೆಯಲ್ಲಿ ಇಬ್ಬರೂ ಸಿಬ್ಬಂದಿಗಳಾದ ರವಿ & ಹರೀಶ್ ಸಣ್ಣಪುಟ್ಟ ಗಾಯಗಳು ಆಗಿವೆ. ಆರೋಪಿಗಳಿಗೆ ಪ್ರಾಥಮಿಕವಾಗಿ ಹಾವೇರಿಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈಗ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನುಳಿದ ಆರೋಪಿಗಳಾದ ಸುದೀಪ್,ಸುರೇಶ್,ಹನಮಂತ ರ ಬಂಧನ ಕೂಡ ಆಗಿದೆ. ಬಂಕಾಪೂರ ಠಾಣೆ ವ್ಯಾಪ್ತಿಯ ಕೋಣನಕೆರೆ ಬಳಿ ಬಂಧನ ಮಾಡಲಾಗಿದೆ. ಒಟ್ಟು 5 ಜನ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಆಡಿಯೋ ಮತ್ತು ವೀಡಿಯೋ ಬಗ್ಗೆ ತನಿಖೆ ಬಳಿಕ ಗೊತ್ತಾಗುತ್ತದೆ ಎಂದರು.
ಘಟನೆ ವಿವರ:
ಮಂಗಳವಾರ ಶಿಗ್ಗಾಂವಿ ಹೊರವಲಯದಲ್ಲಿ ಊಟ ಮಾಡಿ ಮನೆಗೆ ಹಿಂದಿರುಗುತ್ತಿದ್ದಾಗ ಹಾಡಹಗಲೇ ಪ್ರಥಮ ದರ್ಜೆ ಗುತ್ತಿಗೆದಾರ ಶಿವಾನಂದ್ ಕುನ್ನೂರ್ (40) ಅವರ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.
ಕಬ್ಬಿಣದ ರಾಡ್ಗಳು, ಮಚ್ಚುಗಳು ಮತ್ತು ಕತ್ತಿಗಳನ್ನು ಹಿಡಿದ ದಾಳಿಕೋರರು ಅವರ ಕುತ್ತಿಗೆ ಮತ್ತು ತಲೆಯ ಮೇಲೆ ಪದೇ ಪದೆ ದಾಳಿ ನಡೆಸಿದ್ದಾರೆ. ಮತ್ತು ಈ ಕೃತ್ಯವು ಕೆಲವರ ಫೋನ್ನಲ್ಲಿ ರೆಕಾರ್ಡ್ ಮಾಡಲಾಗಿದೆ.