ಹುಬ್ಬಳ್ಳಿ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾಽಕಾರಿ, ತನಿಖಾ ಸಂಸ್ಥೆಗಳ ದುರ್ಬಳಿಕೆ ಹಾಗೂ ಇತರೆ ಶಬ್ದಗಳನ್ನು ನಿಂದಿಸುತ್ತಾರೆ. ಆದರೆ ಇಂದಿನವರೆಗೂ ವೈಯಕ್ತಿಕವಾಗಿ ಯಾರ ವಿರುದ್ಧ ಸೇಡು ತೀರಿಸಿಕೊಂಡಿಲ್ಲ. ಮೋದಿ ದೇಶಕ್ಕಾಗಿ ಬದುಕಿದ್ದಾರೆ. ಇಡೀ ಜಗತ್ತು ಭಾರತದ ನೇತೃತ್ವ ಬಯಸುತ್ತಿದೆ. ಎಂದು ಆರ್ಎಸ್ಎಸ್ ಜೇಷ್ಠ ಪ್ರಚಾರಕ ಸು.ರಾಮಣ್ಣ ಹೇಳಿದರು.
Green Tea: ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದು ಒಳ್ಳೆಯದಾ? ಇಲ್ಲಿದೆ ನೋಡಿ ಉತ್ತರ
ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಘದ ಸಭಾಭವನದಲ್ಲಿ ಸಿಟಿಜಿನ್ಸ್ ಫಾರ್ ಸೋಸಿಯಲ್ ಜಸ್ಟೀಸ್ ಸಂಘಟನೆಯಿಂದ ಆಯೋಜಿಸಿದ್ದ ತುರ್ತು ಪರಿಸ್ಥಿತಿಯ ಕಾರಳ ದಿನಗಳ ಕುರಿತಾದ ಭುಗಿಲು ಮರುಮುದ್ರಣ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ತಮ್ಮ ರಾಜಕೀಯ ಲಾಭ ಹಾಗೂ ತನ್ನನ್ನು ಹಾಗೂ ತನ್ನ ನಿರ್ಧಾರವನ್ನು ಯಾರೂ ಪ್ರಶ್ನಿಸಬಾರದು ಎನ್ನುವ ದುಷ್ಟ ಮನಸ್ಥಿತಿ ಹೊಂದಿದ್ದರು. ಪ್ರಜಾಪ್ರಭುತ್ವದ ಉಳಿವಿಗಾಗಿ ತುರ್ತು ಪರಿಸ್ಥಿತಿ ಎನ್ನುವ ನಾಟಕವಾಡಿ ಸಂವಿಧಾನದ ಮೂಲಕವೇ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವಂತಹ ಕಾರ್ಯ ಮಾಡಿದಳು.
ತುರ್ತು ಪರಿಸ್ಥಿತಿ ಇಡೀ ದೇಶಕ್ಕೆ ಗೊತ್ತಾಗುವ ಮೊದಲೇ ಜಯಪ್ರಕಾಶ ನಾರಾಯಣ ಸೇರಿದಂತೆ ಹಲವು ನಾಯಕರನ್ನು ಬಂಽಸಲಾಯಿತು. ಹಲವು ರಾಜಕೀಯ ಪಕ್ಷಗಳ, ಸಂಘಟನೆಗಳ ಪ್ರಮುಖರು, ಹೋರಾಟಗಾರರು ಸೆರೆಮನೆ ಸೇರಿದರು. ಆದರೆ ಆರ್ಎಸ್ಎಸ್ನ ಪ್ರಚಾರಕರು ಮಾತ್ರ ಭೂಗತವಾಗಿ ಇಡೀ ದೇಶವನ್ನು ಹೋರಾಟಕ್ಕೆ ಸಜ್ಜುಗೊಳಿಸುವ ಕೆಲಸ ಮಾಡಿದರು. ಶೇ.೯೦ ರಷ್ಟು ಪ್ರಚಾರಕರು ಬಂಧನವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಪ್ರಚಾರಕರು ಇಡೀ ದೇಶದಾದ್ಯಂತ ಸಂಪರ್ಕ ಸಾಽಸಿ ಒಂದು ತಿಂಗಳಲ್ಲಿ ಸಂಘಟಿಸಿ ಹೋರಾಟ ರೂಪಿಸಿದರು ಎಂದು ವಿವರಿಸಿದರು.
ದೇಶದ ಜನರು ತುರ್ತು ಪರಿಸ್ಥಿತಿ ಒಪ್ಪಿದ್ದು, ಶಾಂತವಾಗಿದೆ ಎಂದು ವಿದೇಶಗಳಲ್ಲಿ ಬಿಂಬಿಸಲು ಕೆಲಸ ಆಗಿತ್ತು. ಆದರೆ ಅಂದಿನ ಸಂದರ್ಭದಲ್ಲಿ ವಿದೇಶಗಳಲ್ಲೂ ಕೂಡ ದೇಶದ ವಾಸ್ತವ ಚಿತ್ರಣ ತಿಳಿಸುವ ಕೆಲಸ ಮಾಡಲಾಯಿತು. ಪತ್ರಿಕಾ ಸ್ವಾತಂತ್ರ್ಯ ಇಲ್ಲದಿದ್ದಾಗಲೂ ಪತ್ರಿಕೆಗಳನ್ನು ಸ್ಥಾಪಿಸಿ ಜನರಿಗೆ ಹಂಚಲಾಯಿತು. ಹೋರಾಟ ದೀರ್ಘಗೊಂಡಾಗ ಇಂದಿರಾ ಗಾಂಽ ತನಗಂಟಿದ್ದ ಸರ್ವಾಽಕಾರ ಹಣೆಪಟ್ಟಿಯನ್ನು ತೊಳೆದಾಕಲು ಚುನಾವಣೆ ಘೋಷಿಸಿದರು. ಆದರೆ ದೇಶದ ಜನರು ಸರ್ವಾಽಕಾರಿಗೆ ದೊಡ್ಡ ಸೋಲಿನ ಸಂದೇಶ ನೀಡಿದರು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿದ್ದ ಕಾಂಗ್ರೆಸ್ ಇಂದಿಗೂ ಕೂಡ ಅದೇ ಮನಸ್ಥಿತಿಯಲ್ಲಿದೆ. ಎಲ್ಲಾ ರಂಗಗಳನ್ನು ಒತ್ತೆ ಇಡಯುವ ಕೆಲಸ ಅಂದು ಆಗಿತ್ತು. ಈ ಕಾರ್ಯ ಇಂದಿಗೂ ಕಾಂಗ್ರೆಸ್ನಿಂದ ನಡೆಯುತ್ತಿದೆ. ಇಂದಿಗೂ ಪ್ರಜಾಪ್ರಭುತ್ವವನ್ನು ಇವರು ಒಪ್ಪಿಕೊಳ್ಳುವುದಿಲ್ಲ ಎಂದರು. ಉದ್ಯಮಿ ಅಚ್ಯುತ ಲಿಮೆಯೆ ಮಾತನಾಡಿ, ತುರ್ತು ಘೋಷಣೆಯಾದ ಕೂಡಲೇ ಸಂಘದ ಕಾರ್ಯಾಲಯದಲ್ಲಿನ ಕಾರ್ಯಗಳಿಗೆ ನಿರ್ಬಂಧ ಹೇರಲಾಯಿತು.
ಅಂದಿನ ಪರಿಸ್ಥಿತಿಯಲ್ಲಿ ಇಂದಿರಾ ಗಾಂಽ ಎಂದರೆ ಎದರುವಂತಹ ಭಯ ನಿರ್ಮಾಣವಾಗಿತ್ತು ಎಂದ ಅವರ, ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿ ಜೈಲು ಸೇರಿದ ಅನುಭವ ಹಂಚಿಕೊಂಡರು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿ ಡಿಐಆರ್ ಕಾಯ್ದಯಡಿ ಬಂಽತರಾಗಿದ್ದ ಅಚ್ಯುತ ಲಿಮಯೆ, ಮಹಾದೇವ ದಿವಟೆ, ಎಚ್.ಜಿ ಇನಾಮದಾರ, ಶ್ರೀಕಾಂತ ದೇಶಸಾಯಿ, ವೇದವ್ಯಾಸ ಆಚಾರ, ಆನಂದ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ನ್ಯಾಯವಾದಿ ಸಂಜು ಬಡಸ್ಕರ ಅವರು ಸ್ವಾಗತಿಸಿ ಪರಿಚಯಿಸಿದರು. ಸಂದೀಪ ಬೂದಿಹಾಳ ವಂದಿಸಿದರು.