ಬೀದರ್: ಕಾಂಗ್ರೆಸ್ ಪಕ್ಷದಲ್ಲಿ ಗಂಡಸರೂ ಇದ್ದಾರೆ ಅಂತ ಬಿಆರ್ ಪಾಟೀಲ್ ಸಾಬೀತು ಮಾಡಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಗಂಡಸರೇ ಇಲ್ಲ ಅಂದ್ಕೊಡಿದ್ದೆ, ಆದರೆ ಆಳಂದ್ ಶಾಸಕ ಬಿಅರ್ ಪಾಟೀಲ್ ಅದನ್ನು ಸುಳ್ಳು ಮಾಡಿದ್ದಾರೆ, ಅವರ ನಂತರ ರಾಜು ಕಾಗೆ ಮತ್ತು ಗೋಪಾಲಕೃಷ್ಣ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದಾರೆ, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
Green Tea: ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದು ಒಳ್ಳೆಯದಾ? ಇಲ್ಲಿದೆ ನೋಡಿ ಉತ್ತರ
ಇನ್ನೂ ಬಿಜೆಪಿಯಲ್ಲಿ ಭಿನ್ನಮತಕ್ಕೆ ವಿಜಯೇಂದ್ರಗೆ ಹೈಕಮಾಂಡ್ನಿಂದ ಬುಲಾವ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಅಸಮಾಧಾನ ಎನ್ನುವ ಪ್ರಶ್ನೆ ಇಲ್ಲ.
ಯಾರಿಗೆ ಬೇಕಾದರೂ ನಮ್ಮ ಹೈಕಮಾಂಡ್ ಬುಲಾವ್ ಕೊಡಬಹುದು. ಹೇಳೋದು, ಕೇಳೋದು, ವಿಚಾರ ವಿನಿಯಮ ಮಾಡೋದು ಇರುತ್ತದೆ. ಅದಕ್ಕಾಗಿ ವಿಜಯೇಂದ್ರರನ್ನು ಕರೆದಿದ್ದಾರೆ ಅಷ್ಟೇ. ಪಕ್ಷ ಹೇಗೆ ನಡೆಸಬೇಕು ಎಂದು ಸಲಹೆ, ಸೂಚನೆಗಾಗಿ ಕರೆದಿದ್ದಾರೆ ಎಂದು ತಿಳಿಸಿದರು