ಲಕ್ಷ್ಮಿ ದೇವಿಯ ಶುಕ್ರನ ಸಂಬಂಧವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಶುಕ್ರವಾರ ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಶುಕ್ರ ಮತ್ತು ಲಕ್ಷ್ಮೀ ಇಬ್ಬರೂ ಸಂಪತ್ತನ್ನು ಕರುಣಿಸುವವರು. ಈ ದಿನ, ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ತಾಯಿಯು ಸಂತೋಷಗೊಂಡರೆ, ಅವಳು ತನ್ನ ಸ್ಥಳೀಯರಿಗೆ ವಿಶೇಷ ಆಶೀರ್ವಾದವನ್ನು ನೀಡುತ್ತಾಳೆ.
Green Tea: ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದು ಒಳ್ಳೆಯದಾ? ಇಲ್ಲಿದೆ ನೋಡಿ ಉತ್ತರ
ಲಕ್ಷ್ಮಿ ದೇವಿಯು ಪ್ರಸನ್ನಳಾಗಿರುವ ಈ ಶ್ರಾವಣ ಮಾಸದ ಶುಕ್ರವಾರದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಶುಕ್ರನ ಆಶೀರ್ವಾದವೂ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಆಕರ್ಷಣೆ ಹೆಚ್ಚಾಗುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.
ಶುಕ್ರವಾರ ಲಕ್ಷ್ಮಿ ಆರಾಧನೆಯ ಮಹತ್ವ
ಶುಕ್ರವಾರದ ದಿನದಂದು ಸಂಪತ್ತಿನ ದೇವಿಯಾದ ಲಕ್ಷ್ಮಿ ದೇವಿಯನ್ನು ಧಾರ್ಮಿಕ ವಿಧಿ – ವಿಧಾನಗಳೊಂದಿಗೆ ಪೂಜಿಸಬೇಕು. ಲಕ್ಷ್ಮಿ ದೇವಿಯನ್ನು ಪೂಜಿಸುವ ಸಮಯದಲ್ಲಿ ಕಮಲದ ಹೂವನ್ನು ಆಕೆಗೆ ಅರ್ಪಿಸಬೇಕು. ಇದರಿಂದ ಆಕೆ ಬಹುಬೇಗನೆ ಸಂತುಷ್ಟಳಾಗುತ್ತಾಳೆ. ತನ್ನ ಆಶೀರ್ವಾದವನ್ನು ಮಳೆಯಂತೆ ಸುರಿಸುತ್ತಾಳೆ.
ನೀವು ನಿಮ್ಮ ಜೀವನದ ಹಣದ ಸಮಸ್ಯೆಗಳಿಂದ ಮುಕ್ತರಾಗಲು ಬಯಸಿದರೆ ಲಕ್ಷ್ಮಿ ದೇವಿಯನ್ನು ಪೂಜಿಸುವ ಸಮಯದಲ್ಲಿ ಆಕೆಗೆ ಕಡ್ಡಾಯವಾಗಿ ಕಮಲದ ಹೂವನ್ನು ಅರ್ಪಿಸಿ. ಇದು ಮನೆಯಲ್ಲಿ ಧನಾಗಮನವಾಗುವಂತೆ ಮಾಡುತ್ತದೆ ಮತ್ತು ಹಣದ ಸಮಸ್ಯೆಯಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.
ಶುಕ್ರವಾರ ಮನೆಯಲ್ಲಿ ಈಶಾನ್ಯ ಮೂಲೆಯಲ್ಲಿ ಒಂದು ಪೀಠದ ಮೇಲೆ ಲಕ್ಷ್ಮಿ ಫೋಟೋ ಅಥವಾ ವಿಗ್ರಹವನ್ನು ಇಡಬೇಕು. ಪೂಜೆ ಮಾಡುವಾಗ ಆಕೆಗೆ ಪ್ರಿಯವಾದ ಹೂ ಮತ್ತು ಹಣ್ಣುಗಳನ್ನು ಬಳಸಬೇಕು. ಆನಂತರ ‘ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲೇ ಪ್ರಸೀದ್ ಪ್ರಸೀದ್ ಓಂ ಶ್ರೀ ಹ್ರೀಂ ಶ್ರೀಂ ಮಹಾಲಕ್ಷ್ಮಿಯೇ ನಮಃ’ ಎಂತ ಪಠಿಸಬೇಕು. ದೇವಿಗೆ ಇಷ್ಟವಾದ ಬಣ್ಣ ಅಂದರೆ ಬಿಳಿ, ಹಸಿರು ಮತ್ತು ಕೆಂಪು.
ಇದನ್ನು ಧರಿಸಿ ಪೂಜೆ ಮಾಡಿದರೆ ಡಬಲ್ ಧಮಾಕಾ. ಅಷ್ಟೇ ಅಲ್ಲ ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ ಅಥವಾ ಓಂ ಚಿಹ್ನೆಯನ್ನು ಅಂಟಿಸಬೇಕು. ಹಣ ಬೇಕು ಸಂಪತ್ತಿನಿಂದ ತುಂಬಿ ತುಳಕಲಿ ಅಂತ ಪೂಜೆ ಮಾಡಿದೆ ಸಾಕಾ? ಮನೆಯನ್ನು ಮೊದಲು ನೀಟ್ ಆಗಿ ಇಟ್ಟಿಕೊಳ್ಳಬೇಕು. ಮನೆಯಲ್ಲಿ ಯಾವುದೇ ನೆಗೆಟಿವ್ ಎನರ್ಜಿ ಬರದಂತೆ ಧೂಪ ಮತ್ತು ಅಗರಬತ್ತಿಯನ್ನು ಹಚ್ಚಬೇಕು. ಇಷ್ಟು ಮಾಡಿ ಪೂಜೆ ಆರಂಭಿಸಿ ಅಮೇಲೆ ನಿಮ್ಮ ಇಷ್ಟಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಿ.