ಬೆಳಗಾವಿ:- ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಗಾವಿ ನಗರದ ವಡಗಾಂವ್ ಧಾಮಣಿ ರಸ್ತೆಯ ಸಿದ್ಧಾರೂಡ ಕಾಲೋನಿ ಕ್ರಾಸ್ ನಲ್ಲಿ ಗುರುವಾರ ಜರುಗಿದೆ. 22 ವರ್ಷದ ಪ್ರಥಮೇಶ್ ಮಹೇಶ್ ಕಣಬರಕರ್, ಅನಿಕೇತ ಜ್ಞಾನೇಶ್ವರ ಪೋಟೆ ಬಂಧಿತರು.
ಬಂದಿತರಲ್ಲಿ ಪ್ರಥಮೇಶ್ ಮಹೇಶ್ ಕಣಬರಕರ್, ಬೆಳಗಾವಿಯ ಶಹಾಪೂರದ ಗಣೇಶಪುರ ಗಲ್ಲಿ ನಿವಾಸಿ. ಇವರು ಚೇತಕ ಎಲೆಕ್ಟ್ರಿಕಲ್ ಬೈಕ್ ಸ್ಪೇರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇನ್ನೂ ಮತ್ತೋರ್ವ ಅನಿಕೇತ, ಬೆಳಗಾವಿ ಶಹಾಪೂರದ ಜೋಶಿ ಗಲ್ಲಿ ನಿವಾಸಿ. ಈತ ಇಲೆಕ್ಟ್ರೀಷಿಯನ್ ಆಗಿದ್ದ ಎನ್ನಲಾಗಿದೆ.
ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಲು ಯತ್ನಿಸುತ್ತಿದ್ದರು. ಇದರ ಖಚಿತ ಮಾಹಿತಿ ಮೇರೆಗೆ ಶಹಾಪೂರ ಪೊಲೀಸರು, ದಾಳಿ ನಡೆಸಿ ಆರೋಪಿಗಳಿಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 50,550 ರೂ. ಮೌಲ್ಯದ 115 ಗ್ರಾಂ ತೂಕದ ಹಸಿ ಗಾಂಜಾ ಸೀಜ್ ಮಾಡಲಾಗಿದೆ. ಹಾಗೂ ಸುಜುಕಿ ಆಕ್ಸೆಸ್ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.