ಬೆಳಗಾವಿ:- ಪಶ್ಚಿಮ ಘಟ್ಟ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ, ಶಿರೂರು ಜಲಾಶಯ ಬಹುತೇಕ ಭರ್ತಿ ಆಗಿದೆ. ತಾಲೂಕಿನ ಶಿರೂರು ಗ್ರಾಮದಲ್ಲಿರುವ ಡ್ಯಾಂ ಭರ್ತಿಗೆ ನಾಲ್ಕು ಅಡಿ ಮಾತ್ರ ಬಾಕಿ ಉಳಿದಿದೆ.
ಇಂದು ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ: ಪ್ರಶಸ್ತಿ ಪ್ರದಾನ, ಅನೇಕ ಕಾರ್ಯಕ್ರಮಗಳ ಆಯೋಜನೆ!
ಹೀಗಾಗಿ ಜಲಾಶಯದಿಂದ 700 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಎರಡು ಗೇಟ್ ಗಳ ಮೂಲಕ ನೀರು ರಿಲೀಸ್ ಮಾಡಲಾಗಿದೆ. 3.6 ಟಿಎಂಸಿ ಸಾಮರ್ಥ್ಯದ ಶಿರೂರು ಜಲಾಶಯದಲ್ಲಿ ಈಗಾಗಲೇ 2.4ಟಿಎಂಸಿ ನೀರು ಭರ್ತಿ ಆಗಿದೆ. ಹೀಗಾಗಿ ನೀರು ಬಿಡುಗಡೆ ಮಾಡಲಾಗಿದೆ.
ಇನ್ನೂ ಕರ್ನಾಟಕದಲ್ಲಿ ಮುಂಗಾರು ಆರ್ಭಟ ಜೋರಾಗಿದ್ದು, ಹಲವು ಜಿಲ್ಲೆಗಳಲ್ಲಿ ಧಾರಕಾರ ಮಳೆ ಆಗುತ್ತಿದೆ.