Close Menu
Ain Live News
    Facebook X (Twitter) Instagram YouTube
    Friday, June 27
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಬಿ ಕಾಂ, ಎಲ್ ಎಲ್ ಬಿ ಕೋರ್ಸ್ ಆರಂಭ: ಮೋಹನ ಲಿಂಬಿಕಾಯಿ

    By Author AINJune 27, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ನಗರದ ಜಗದ್ಗುರು ಮಠ ಮೂರುಸಾವಿರ ವಿದ್ಯಾವರ್ಧಕ ಸಂಘದ (ಎಸ್‌ಜೆಎಂವಿಎಸ್) ವತಿಯಿಂದ ಕಾಲೇಜು ಕಾನೂನು ಆರಂಭಿಸಲಾ ಗುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಿಕಾಂ, ಎಲ್‌ಎಲ್‌ಬಿ ಐದು ವರ್ಷದ ಶುರುವಾಗಲಿದೆ ಎಂದು ಶ್ರೀಮಠದ ಉನ್ನತ ಸಮಿತಿ ಸಂಚಾಲಕ ಮೋಹನ ಲಿಂಬಿಕಾಯಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಯಾವುದೇ ಕಾರಣಕ್ಕೂ ಡೊನೇಷನ್ ಪಡೆಯುವುದಿಲ್ಲ. ಇದೊಂದು ಸೇವಾ ಮನೋಭಾವದ ಸಂಸ್ಥೆಯಾಗಿದೆ ಎಂದರು.

    ನಿಮ್ಮ ಡೊಳ್ಳು ಹೊಟ್ಟೆ ಚಪ್ಪಟೆ ಆಗಲು ಕಾಫಿ ಟೀ ಬದಲು ಬೆಳಗೆದ್ದು ಈ ನೀರು ಕುಡಿಯಿರಿ!

    ನೂತನವಾಗಿ ಎರಡು ಕೊಠಡಿಗಳು, ಪ್ರಾಚಾರ್ಯರ ಚೇಂಬರ್. ಮೂವರು ಡಿಜಿಟಲ್ ಲೈಬ್ರರಿ ಇದ್ದು, ಶಿಕ್ಷಕರು ಬೋಧನೆ ಮಾಡುವರು. ಹಿರಿಯ ವಕೀಲರನ್ನು ಸಹ ಅತಿಥಿ ಪ್ರಾಧ್ಯಾಪಕರ ನ್ನಾಗಿ ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡಿಸಲಾಗುವುದು. ಸದ್ಯ 60 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು. ಜುಲೈ 1ರಿಂದ ಪ್ರವೇಶ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಆಗಸ್ಟ್ 1ರಿಂದ ತರಗತಿ ಆರಂಭಗೊಳ್ಳಲಿವೆ ಎಂದು ತಿಳಿಸಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ‘ಯಲ್ಲಿ ಮಾತನಾಡಿದ ಅವರು, ಈ ಕೋರ್ಸ್‌ಗೆ ದ್ವಿತೀಯ ಪರೀಕ್ಷೆಯಲ್ಲಿ ಶೇ.45 ಅಂಕ ಪಡೆದವರಿಗೂ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದರು. ಪ್ರತಿ ವಾರ ವಿದ್ಯಾರ್ಥಿಗಳನ್ನು ಕೋರ್ಟಿಗೆ ಕರೆದೊಯ್ದು ಪ್ರಾ ಕ್ಟಿಕಲ್ ಅನುಭವ ನೀಡಲಾಗುವುದು. ಅಣಕು ಕಾರ್ಯಾ ಚರಣೆಯನ್ನೂ ನಡೆಸಲಾಗು ವುದು. ಕಾನೂನು ಕಾಲೇಜಿಗೆ ಕರ್ನಾಟಕ ರಾಜ್ಯ ಕಾನೂನು ವಿವಿ ಹಾಗೂ ಕೇಂದ್ರ ವಕೀಲರ ಪರಿಷತ್ತಿನಿಂದ ಮಾನ್ಯತೆ ದೊರೆತಿದೆ. ಈಗಾಗಲೇ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಬಿಎ, ಎಲ್‌ಎಲ್‌ಬಿ ಆರಂಭಿ ಸುವ ಯೋಜನೆಯೂ ಇದೆ ಎಂದರು‌.

    ಮೂರುಸಾವಿರ ಮಠ ಆವರಣದ ಶಿಕ್ಷಣ ಸಮುಚ್ಚಯದ ಜ್ಞಾನ ಮಂದಿರದ ನೆಲ ಮಹಡಿಯ ಭಾಗವನ್ನು ಕಾನೂನು ಮಹಾವಿದ್ಯಾಲಯಕ್ಕೆ ತಾತ್ಕಾಲಿಕವಾಗಿ ಮೀಸಲಿಡಲಾಗಿದೆ. ಅಲ್ಲಿರುವ ಐಟಿಐ ತರಗತಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದರು. ಹುಬ್ಬಳ್ಳಿ -ಕುಸುಗಲ್ ರಸ್ತೆಯಲ್ಲಿರುವ ಶ್ರೀಮಠದ 3.20 ಎಕರೆ ಜಾಗದಲ್ಲಿ 2 ವರ್ಷದಲ್ಲಿ ಕಾನೂನು ಕಾಲೇಜ್ ಕಟ್ಟಡ ನಿರ್ಮಿಸಲಾಗುವುದು. ಕಾನೂನು ವಿವಿ ನಿಯಮದ ಪ್ರಕಾರ ವಿದ್ಯಾರ್ಥಿಗಳಿಂದ ಶುಲ್ಕ ಆಕರಿಸಲಾಗುವುದು ಎಂದರು. ಸಂಘದ ಗೌರವ ಕಾರ್ಯಾಧ್ಯಕ್ಷ ಅರವಿಂದ ಕುಬಸದ, ನಿರ್ದೇಶಕ ಶಶಿ ಸಾಲಿ, ವೀರಣ್ಣ ಕಲ್ಲೂರ, ಲಿಂಗರಾಜ ಇಂಗಳಹಳ್ಳಿ, ಪ್ರಾಚಾರ್ಯೆ ಸವಿತಾ ದೇಶಪಾಂಡೆ, ಸದಾನಂದ ಡಂಗನವರ, ಚನ್ನಬಸಪ್ಪ ಧಾರವಾಡಶೆಟ್ರ ಇದ್ದರು.

    Demo
    Share. Facebook Twitter LinkedIn Email WhatsApp

    Related Posts

    ಕೈಗೆಟುಕುವ ದರದ 4 ಚಕ್ರದ ಮಿನಿ-ಟ್ರಕ್ ಏಸ್ ಪ್ರೋ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

    June 27, 2025

    ವೀರಶೈವ ಮಹಾಸಭಾ ವಾಣಿಜ್ಯ, ಕೈಗಾರಿಕಾ ವಿಭಾಗದ ಅಧ್ಯಕ್ಷರಾಗಿ ಉಮೇಶ್ ಪಾಟೀಲ್ ನೇಮಕ

    June 27, 2025

    ರಜನಿಕಾಂತ್‌ ಭೇಟಿಯಾದ ಅಣ್ಣಾವ್ರ ಮಗಳು-ಮೊಮ್ಮಗಳು! Photo ವೈರಲ್!‌

    June 27, 2025

    ಮಲೆಮಹದೇಶ್ವರ ಅರಣ್ಯದಲ್ಲಿ 5 ಹುಲಿಗಳ ದುರಂತ ಅಂತ್ಯ: ಐವರನ್ನು ವಶಕ್ಕೆ ಪಡೆದ ತನಿಖಾಧಿಕಾರಿಗಳು!

    June 27, 2025

    ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆ: ಶಿರೂರು ಜಲಾಶಯ ಭರ್ತಿಗೆ 4 ಅಡಿ ಬಾಕಿ.. ನೀರು ಬಿಡುಗಡೆ!

    June 27, 2025

    ಕಾರವಾರ: ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ಯುವಕ!

    June 27, 2025

    ಬೈಕ್ ನಲ್ಲಿ ಅಕ್ರಮ ಗಾಂಜಾ ಸಾಗಾಟ: ಮೂವರು ಅರೆಸ್ಟ್!

    June 27, 2025

    ಚಾಮರಾಜನಗರ: ವಿಷಪ್ರಾಶನದಿಂದ ಐದು ಹುಲಿಗಳು ಸಾವನ್ನಪ್ಪಿರುವ ಶಂಕೆ!?

    June 27, 2025

    ಧಾರಕಾರ ಮಳೆ: ಇಂದು ಕೊಡಗು ಜಿಲ್ಲೆಯಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆ!

    June 27, 2025

    ಹೆತ್ತ ತಾಯಿಯ ಬರ್ಬರ ಕೊಲೆ: ಶವ ಕಾಡಿನಲ್ಲಿ ಸುಟ್ಟು ಹೋಗಿದ್ದ ಆರೋಪಿ ಅರೆಸ್ಟ್!

    June 27, 2025

    ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರು ಅರೆಸ್ಟ್!

    June 27, 2025

    ಕೊಡಗಿನಲ್ಲಿ ಧಾರಕಾರ ಮಳೆ: ತುಂಬಿ ಹರಿಯುತ್ತಿರುವ ನದಿ ತೊರೆಗಳು.. ರಸ್ತೆ ಸಂಪರ್ಕ ಬಂದ್!

    June 26, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.