ಹುಬ್ಬಳ್ಳಿ: ತಾಲೂಕಿನ ಹೆಬಸೂರು ಗ್ರಾಮದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಶಿಬಿರ ಇಂದು ನಡೆಸಲಾಯಿತು. ಹುಬ್ಬಳ್ಳಿ ತಾಲೂಕಿನ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಭೂಮ್ಮಣ್ಣವರ ಹಾಗೂ ತಾಲೂಕು ಪಂಚಾಯತ ಹುಬ್ಬಳ್ಳಿ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಸಸಿಗೆ ನೀರ ಎರೆಯುವುದರ ಮೂಲಕ ಶಿಬಿರಕೆ ಚಾಲನೆ ನೀಡಲಾಯಿತು .
ಡ್ರೈ ಫ್ರೂಟ್ಸ್ ಒಳ್ಳೆಯದು ಆದರೆ ಇಂಥವರು ಯಾವುದೇ ಕಾರಣಕ್ಕೂ ತಿನ್ನಬಾರದು..!
ನಂತರ ಅನುಷ್ಠಾನ ಅಧಿಕಾರಿಗಳ ಪ್ರಗತಿಯನ್ನು ಓದಿ ತಿಳಿಸಿದರು. ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಪಂಚ ಗ್ಯಾರಂಟಿ ಯೋಜನೆಯಿಂದ ವಂಚಿತರಾದರಿಗೆ ಯೋಜನೆ ಮಾಹಿತಿ ನೀಡಿದರು ಹುಬ್ಬಳ್ಳಿ ತಾಲೂಕಿನ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಭೂಮ್ಮಣ್ಣವರ ಮಾತನಾಡಿ,
ಪಂಚ ಗ್ಯಾರಂಟಿ ಯೋಜನೆ ಮಹತ್ವದ ಮತ್ತು ಪ್ರಗತಿ ಬಗ್ಗೆ ಅರಿವು ಮೂಡಿಸಿದರು ಇದರ ಜೊತೆಗೆ ಅನರ್ಹ ಫಲನುಭವಿಗಳಿಗೆ ಅರ್ಹತೆ ಪಡೆಯುವ ಬಗ್ಗೆ ಮಾಹಿತಿ ನೀಡಿ ಅರ್ಹರು ಪಂಚ ಗ್ಯಾರಂಟಿ ಯೋಜನೆ ಲಾಭ ಪಡೆಯಬೇಕು ಎಂದರು. ಶಿಬಿರದಲ್ಲಿ ಹೆಬಸೂರ ಗ್ರಾಮ ಪಂಚಾಯತ ಅಧ್ಯಕ್ಷರು ಸದಸ್ಯರು, ಪಂಚಾಯತ್ ಅಭಿವೃದಿ ಅಧಿಕಾರಿಗಳು ಮತ್ತು ಎಲ್ಲಾ ಸಿಬಂದಿಗಳು ಭಾಗವಹಿಸಿದ್ದರು.