ಕೋಲಾರ : ನಾಡಪ್ರಭು ಕೆಂಪೇಗೌಡರು ಗೋಪುರಗಳು, ಕೆರೆ ಕಟ್ಟೆಗಳು ವೃತ್ತಿಗೊಂದು ಪೇಟೆ ನಿರ್ಮಾಣ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ಕೆಂಪೇಗೌಡರನ್ನ ಬೆಂಗಳೂರು ನಗರ ನಿರ್ಮಾತೃ ಎಂದೇ ಕರೆಯಲಾಗುತ್ತೆ.ಇಂತಹ ಮಹಾತ್ಮ ದಿನಾಚರಣೆಯನ್ನು ರಾಜ್ಯದೆಲ್ಲೆಡೆ ಆಚರಿಸಲಾಗಿದೆ.
ಆದ್ರೆ, ಕೋಲಾರದಲ್ಲಿ ಕೆಂಪೇಗೌಡ ಜಯಂತಿ ಮೆರವಣಿಯಲ್ಲಿ ಮಂಗಳಮುಖಿಯರು ಅಶ್ಲೀಲವಾಗಿ ನೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ.ಕೋಲಾರದಲ್ಲಿ ಕೆಂಪೇಗೌಡ ಜಯಂತಿಯಲ್ಲಿ ಮಂಗಳಮುಖಿಯರು ಅರೆ ಬೆರೆ ಬಟ್ಟೆ ತೊಟ್ಟು ಯುವಕರೊಂದಿಗೆ ಅಶ್ಲೀಲ ಪ್ರಚೋದನಾ ನೃತ್ಯ ಮಾಡಿದ್ದಾರೆ.ಈ ವಿಡಿಯೋಗೆ ಭಾರೀ ಟೀಕೆಗಳು ವ್ಯಕ್ತವಾಗಿದ್ದು, ಮಹಾತ್ಮನ ಜಯಂತಿ ವೇಳೆ ಇದೆಲ್ಲಾ ಬೇಕಿತ್ತಾ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.