ಹೊಸಕೋಟೆ:- ಸಿಲಿಕಾನ್ ಸಿಟಿ ಹೊರಭಾಗದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಒಂದೇ ದಿನ 5 ಕಡೆ ಸರಗಳ್ಳತನ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಭದ್ರಾ ನೀರು ಹರಿಸಲು ಅಡ್ಡಿ| ಇಂದು ದಾವಣಗೆರೆ ಬಂದ್: ಟಯರ್ ಗೆ ಬೆಂಕಿ ಹಚ್ಚಿ ಬಿಜೆಪಿ ನಾಯಕರ ಆಕ್ರೋಶ
ದ್ವಿಚಕ್ರದಲ್ಲಿ ಬಂದು ಸರ ಕಳ್ಳತನ ಮಾಡಿ ಕಳ್ಳರು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ 28 ವಾರ್ಡ್ ನಲ್ಲಿ ಜರುಗಿದೆ. ಖದೀಮರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅಂಗಡಿಯಲ್ಲಿ ವ್ಯಾಪಾರದ ನೆಪದಲ್ಲಿ ಬಂದು ಕಳ್ಳತನ ಮಾಡಿದ್ದಾರೆ. ಕಳ್ಳರ ಹಾವಳಿಯಿಂದ ಅಂಗಡಿ ಮಾಲೀಕರು ಜೀವ ಭಯದಲ್ಲಿ ಇರುವ ಪರಿಸ್ಥಿತಿ ಬಂದಿದೆ.
ಅಂಗಡಿಯಲ್ಲಿದ್ದ ಮಹಿಳೆಯ ಕೊರಳಲ್ಲಿ 40 ಗ್ರಾಂ ತೂಕದ ಚಿನ್ನದ ಸರ ಕಳ್ಳತನ ನಡೆದಿದ್ದು, ಮಹಿಳೆ ಚಿನ್ನದ ಸರ ಹಿಡಿದುಕೊಂಡ ಹಿನ್ನಲೆ ಅರ್ಧಕ್ಕೆ ಕಟ್ ಆಗಿದೆ. ಹೀಗಾಗಿ ಕಳ್ಳರನ್ನ ಬಂಧಿಸುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. ಹೊಸಕೋಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.