ಚಾಮರಾಜನಗರ: ಬಂಡೀಪುರದಲ್ಲಿ ಆಯೋಜಿಸಿದ್ದ ಅರಣ್ಯ ಸಿಬ್ಬಂದಿಗಳಿಗೆ ಉಚಿತ ಕಿಟ್ ವಿತರಣೆ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು ಮೈಸೂರು ಸ್ಯಾಂಡಲ್ ಸಂಸ್ಥೆ ವತಿಯಿಂದ ಅರಣ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಗಳ ಸುರಕ್ಷತೆಗೆ ಅನುಕೂಲವಾದ ಕಿಟ್ಟನ್ನು ನೀಡಲಾಗುತ್ತಿದೆ ಎಂದು ರಾಜ್ಯವನ ಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ್ ಹೇಳಿದರು .
ಮಧುಮೇಹಿಗಳೇ ಗಮನಿಸಿ.. ಸಕ್ಕರೆ ಕಾಯಿಲೆಗೆ ಕೆಂಪು ದಂಟಿನ ಸೊಪ್ಪು ವರದಾನ..! ಸಿಕ್ಕರೆ ಬಿಡದೆ ತಿನ್ನಿ
ನಂತರ ಮಾತನಾಡಿದ ಧೃವಪಾಟೀಲ್ ಶ್ರೀಗಂಧದ ಮರಗಳ ರಕ್ಷಣೆ ಹಾಗೂ ಬೆಳವಣಿಗೆ ಅರಣ್ಯ ಸಂರಕ್ಷಣೆ ಹಾಗೂ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಸಿಬ್ಬಂದಿಯ ಪಾತ್ರ ತುಂಬಾ ಪ್ರಮುಖವಾಗಿದೆ.
ಅವರು ತಮ್ಮ ಮನೆಗಳಿಗೆ ವಾರಕ್ಕೊಮ್ಮೆಯೂ ಹೋಗಲು ಸಾಧ್ಯವಾಗದೆ ಕಳ್ಳಬೇಟೆ ತಡೆ ಶಿಬಿರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಇವರ ಸುರಕ್ಷೆತೆಗೆ ಅನುಗುಣವಾಗಿ ಕಿಟ್ ತಯಾರಿಸಿ ರಾಜ್ಯದ ಎಲ್ಲಾ ಅರಣ್ಯ ಸಿಬ್ಬಂದಿಗೆ ತಲುಪಿಸಲು ಯೋಜನೆ ರೂಪಿಸಲಾಗಿದ್ದು ಆಯಾ ವಲಯಗಳಿಗೆ ಹೋಗಿ ತಲುಪಿಸಲಾಗುತ್ತಿದೆ ಎಂದು ಹೇಳಿದರು.
ಬಂಡೀಪುರ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ಎಸ್.ಪ್ರಭಾಕರನ್ ಮಾತನಾಡಿ, ಸಂಸ್ಥೆಯು ತನ್ನ ನಿಧಿಯಿಂದ ಸಿಬ್ಬಂದಿಗೆ ಅತಿ ಉಪಯುಕ್ತವಾದ ಕಿಟ್ ವಿತರಣೆ ಮಾಡಿದೆ. ಸದ್ಯ ಹುಲಿ ಸಂರಕ್ಷಿತ ಪ್ರದೇಶದ 3 ಕುಂದಕೆರೆ, ಗೋಪಾಲಸ್ವಾಮಿಬೆಟ್ಟ ಹಾಗೂ ಬಂಡೀಪುರ ಮೂರು ವಲಯಗಳ ಮುಂಚೂಣಿ ಸಿಬ್ಬಂದಿಗೆ ಕಿಟ್ ವಿತರಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಸಿಬ್ಬಂದಿಗಳಿಗೂ ನೀಡುತ್ತಾರೆ . ಇದರಲ್ಲಿ ಕುಡಿವ ನೀರಿನ ಬಾಟೆಲ್, ಜಾಕೆಟ್ ಹಾಗೂ ಶೂ, ಒಳಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು,ಈ ಸಂದರ್ಭದಲ್ಲಿ ಉಪವಿಭಾಗದ ಎಸಿಎಫ್ ಎನ್.ಪಿ.ನವೀನ್ ಕುಮಾರ್, ವಲಯಾರಣ್ಯಾಧಿಕಾರಿಗಳಾದ ಎನ್.ಸಿ.ಮಹದೇವ, ಬಿ.ಎಂ.ಮಲ್ಲೇಶ್, ಪ್ರಭಾರ ವಲಯಾರಣ್ಯಾಧಿಕಾರಿ ವೈರಮುಡಿ ಹಾಗೂ ಇತರರು ಇದ್ದರು.