ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಹೂಗ್ಯಂ ವಲಯದಲ್ಲಿ ಐದು ಹುಲಿಗಳು, ಸಾವನ್ನಪ್ಪಿರುವ ಘಟನೆಗೆ ಕಾರಣರೆನ್ನಲಾದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂಧಿಗಳು ಇಂದು ಬಂಧಿಸಿದ್ದಾರೆ.
ಹುಲಿ ಭೇಟೆಯಿಂದ ಸತ್ತ ಹಸುವಿಗೆ ಪೋರೆಟ್ ಕ್ರಿಮಿನಾಶಕ ಹಾಕಿ ಹುಲಿ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾದ ಹಸುವಿನ ಮಾಲಿಕ ಕೊಪ್ಪ ಗ್ರಾಮದ ಕೋನಪ್ಪ ಹಾಗೂ ಇದೇ ಗ್ರಾಮದ ಮಾದರಾಜ್ ಮತ್ತು ಕಳ್ಗೋಬೆದೊಡ್ಡಿ ಗ್ರಾಮದ ನಾಗರಾಜ್ ಬಿನ್ ಪೂಜಾರಿಗೌಡ ಎಂಬವರನ್ನು ಬಂಧಿಸಲಾಗಿದೆ.
ಮಧುಮೇಹಿಗಳೇ ಗಮನಿಸಿ.. ಸಕ್ಕರೆ ಕಾಯಿಲೆಗೆ ಕೆಂಪು ದಂಟಿನ ಸೊಪ್ಪು ವರದಾನ..! ಸಿಕ್ಕರೆ ಬಿಡದೆ ತಿನ್ನಿ
ಘಟನೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಆರೇಳು ಮಂದಿಯನ್ನು ವಿಚಾರಣೆಗೊಳಪಡಿಸಿದ್ರು.ಇನ್ನೂ ಬಂಧಿತರನ್ನು ಎನ್ ಟಿಸಿಎಹಾಗೂ ವಿಶೇಷ ತನಿಖಾ ತಂಡದ ವಿಚಾರಣೆಗೆ ಒಳಪಡಿಸಲಿದ್ದಾರೆ.