ದೊಡ್ಡಬಳ್ಳಾಪುರ: ಸಂಬಳ ನೀಡದೆ ಏಕಾಏಕಿ ಆಸ್ವತ್ರೆಗೆ ಬೀಗ ಜಡಿದಿದಕ್ಕೆ 7 ಹಿಲ್ಸ್ ಆಸ್ವತ್ರೆ ಮುಂದೆ ಅಂಬೇಡ್ಕರ್ ಫೋಟೋ ಇಟ್ಟು ಧರಣಿ ನಡೆಸಿ ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ 7 ಹಿಲ್ಸ್ ಆಸ್ವತ್ರೆ ಮುಂದೆ ಸಿಬ್ಬಂದಿಯಿಂದ ಪ್ರತಿಭಟನೆ ನಡೆಸಿದ್ದು,
ಕಳೆದ ಮೂರು ತಿಂಗಳಿಂದ ಸಂಬಳವಿಲ್ಲದೆ ಪರದಾಡುತ್ತಿರುವ 50ಕ್ಕೂ ಅಧಿಕ ಸಿಬ್ಬಂದಿ, ಆಸ್ಪತ್ರೆಯ ಆಡಳಿತ ಮಂಡಳಿಯಿಂದ ನ್ಯಾಯ ಕೋರಿ, ಆಸ್ಪತ್ರೆಯ ಮುಂಭಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಫೋಟೋ ಇರಿಸಿ ಧರಣಿ ನಡೆಸಿದ್ದಾರೆ. ಜೊತೆಗೆ ತಕ್ಷಣವೇ ಸಂಬಳ ಬಿಡುಗಡೆಗೆ ಒತ್ತಾಯಿಸಿದ್ದಾರೆ.
ಮನೆಯಲ್ಲಿ ಕಪ್ಪು ಹಲ್ಲಿ ಕಾಣಿಸಿಕೊಂಡ್ರೆ ಏನದರ ಸೂಚನೆ: ನಿಮಗೆ ಗೊತ್ತಿಲ್ಲದ ವಿಚಾರ ಇಲ್ಲಿದೆ!
ದೊಡ್ಡಬಳ್ಳಾಪುರದ ಸೆವೆನ್ ಹಿಲ್ಸ್ ಆಸ್ಪತ್ರೆಯು ಒಂದು ಬಹುವಿಶೇಷತೆಯ ಆರೋಗ್ಯ ಕೇಂದ್ರವಾಗಿದ್ದು, ಐಸಿಯು, ಎನ್ಐಸಿಯು, ಸಿಟಿ ಸ್ಕ್ಯಾನ್ ಮುಂತಾದ ಸುಧಾರಿತ ಸೌಲಭ್ಯಗಳನ್ನು ಹೊಂದಿದೆ. ಆದರೆ, ಕಳೆದ ಮೂರು ತಿಂಗಳಿಂದ ಸಿಬ್ಬಂದಿಗೆ ಸಂಬಳವನ್ನು ನೀಡದಿರುವುದು ಮತ್ತು ಇದೀಗ ಆಸ್ಪತ್ರೆಗೆ ಏಕಾಏಕಿ ಬೀಗ ಜಡಿಯಲಾಗಿರುವುದು ಸಿಬ್ಬಂದಿಯ ಆಕ್ರೋಶಕ್ಕೆ ಕಾರಣವಾಗಿದೆ.