ಚಾಮರಾಜನಗರ: ಜಿಲ್ಲೆಯ ರೋಟರಿ ಸಂಸ್ಥೆಯ 2025-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಾಗಲವಾಡಿ ಚಂದ್ರುರವರು ಇಂದು ಅಧಿಕಾರ ಸ್ವೀಕರಿಸಿದರು. ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾರಂಗಮಂದಿರದಲ್ಲಿ ನಡೆದ ನೂತನ ಅಧ್ಯಕ್ಚರ ಪದವಿ ಸಮಾರಂಭವನ್ನು ರೋಟರಿ ಸಂಸ್ಥೆಯ ರೋ: ಸತೀಶ್ ಬೋಲಾರ್ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಪದವಿ ಸ್ವೀಕರಿಸಿ ಮಾತನಾಡಿದ ರೋಟರಿ ಸಂಸ್ಥೆಯ ನೂತನ ಅಧ್ಯಕ್ಚ ಕಾಗಲವಾಡಿ ಚಂದ್ರು ಸಂಸ್ಥೆಯಲ್ಲಿ ನಿರಂತರವಾಗಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡು ಬಂದಿದ್ದು ಇಂತಹ ಸೇವಾ ಕಾರ್ಯದಲ್ಲಿ ಸಂಪೂರ್ಣ ತೊಡಗಿಕೊಳ್ಳಲು ರೋಟರಿ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳ ಸಹಕಾರ ಹಿಂದೆನೂ ಇತ್ತು ಮುಂದಿನ ದಿನಗಳಲ್ಲು ಸಂಪೂರ್ಣ ಬೆಂಬಕ ನೀಡುವಂತೆ ಕೋರಿದರು.
ಅಧಿಕಾರದ ಅವಧಿಯಲ್ಲಿ ಮತ್ತಷ್ಟು ಸೇವಾಮನೋಭಾವದ ಶಕ್ತಿಯನ್ನು ವೃದ್ದಿಸಿಕೊಂಡು ರೋಟರಿ ಸಂಸ್ಥೆ ಹಾಗೂ ಸಮಾಜದ ಅಭಿವೃದ್ದಿಗೆ ದುಡಿಯಲು ಕಂಕಣ ಬದ್ದನಾಗಿರುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.