ವಿರಾಜಪೇಟೆ: ಕೊಡಗು ಜಿಲ್ಲೆ ವಿರಾಜಪೇಟೆ ಆರ್ಜಿ ಗ್ರಾಮದ ಕೇರಳ ಮತ್ತು ಕರ್ನಾಟಕ ರಾಜ್ಯದ ಹೆದ್ದಾರಿ ಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ರಾತ್ರಿ ಮಲಬಾರ್ ರಸ್ತೆಯ ಕೊರಗಜ್ಜ ದೇವಾಲಯ ದ ಬಳಿ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ.
ಇದು ಗೂಂಡಾವರ್ತನೆ ಅಲ್ಲದೇ ಮತ್ತೇನು? ಗಾಳಿಯಲ್ಲಿ ಗುಂಡು ಹಾರಿಸಿ ಬರ್ತಡೇ ಮಾಡಿಕೊಂಡ ಗ್ರಾ. ಪಂ. ಸದಸ್ಯ!
ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಮೊದಲ ಅಪಘಾತ ವಾಗಿದ್ದು ಬೆಳಗ್ಗೆ ಮೂರು ಗಂಟೆಗೆ ಅದೇ ತಿರುವಿನಲ್ಲಿ ನಾಲ್ಕು ಕಾರುಗಳು ಅಪಘಾತ ವಾಗಿದೆ ಎಂದು ಸ್ಥಳೀಯ ನಿವಾಸಿ ಚುಪ್ಪ ನಾಗರಾಜ್ ರವರು ಮಾಹಿತಿ ನೀಡಿದರು
ಈ ತಿರುವಿನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ರೀತಿಯಲ್ಲಿ ಅವಘಡ ನಡೆಯುತ್ತದೆ.
ಈ ಅಪಾಯ ಕಾರಿ ತಿರುವಿನಲ್ಲಿ ಯಾವುದೇ ಎಚ್ಚರಿಕೆ ಯ ನಾಮ ಇರುವುದಿಲ್ಲ ಅಲ್ಲದೆ ಕೇರಳ ರಾಜ್ಯದಿಂದ ಬರುವ ವಾಹನಗಳು ಕೂಡ ಅತೀ ವೇಗವಾಗಿ ಚಲಿಸುವ ವೇಳೆ ಅಪಘಾತ ಸಂಬವಿಸುತ್ತಿದೆ.