ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚೀಟಿ ವಂಚಕರ ಸರಪಳಿ ಹೆಚ್ಚಾಗಿದೆ. ಕಷ್ಟ ಕಾಲದಲ್ಲಿ ಸಹಾಯಕ್ಕೆ ಆಗುತ್ತೆ ಎಂದು ನೀವೇನಾದರೂ ಚೀಟಿ ಹಾಕುತ್ತಿದ್ದರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ತಿಂಗಳೆಲ್ಲ ಕಷ್ಟ ಪಟ್ಟು ಕೂಡಿಟ್ಟು ಕಟ್ಟಿದ ಚೀಟಿಯ ಹಣ ಕಂಡವರ ಪಾಲಾಗೋದಯು ಗ್ಯಾರಂಟಿ. ನಂಬಿಕೆ ಬರೋ ಹಾಗೆ ನಟಿಸಿ, ನಂತರ ಕೋಟ್ಯಾಂತರ ರೂಪಾಯಿಗೆ ಪಂಗನಾಮ ಹಾಕಿದ್ದಾರೆ.
40 ಕ್ಕೂ ಹೆಚ್ಚು ಜನರಿಗೆ ಒಂದೂವರೆ ಕೋಟಿಗೂ ಅಧಿಕ ಹಣ ಪಂಗನಾಮ ಹಾಕಿರುವುದು ಬೆಳಕಿಗೆ ಬಂದಿದೆ. ಎಸ್, ದೇವರಚಿಕ್ಕನಹಳ್ಳಿಯ ಶ್ರೀನಿವಾಸ ಲೇಔಟ್ ನಿವಾಸಿ ದೇವರಚಿಕ್ಕನಹಳ್ಳಿಯ ಶ್ರೀನಿವಾಸ ಲೇಔಟ್ ನ ಪಾಂಡುರಂಗ ಎಂಬಾತ 20 ವರ್ಷಗಳಿಂದ ಚೀಟಿ ವ್ಯವಹಾರ ಮಾಡುತ್ತಿದ್ದ. ಇವನ ಬಳಿ ಟ್ರೀಟ್ಮೆಂಟ್ ಆಗುತ್ತೆ ಎಂದು ಕ್ಯಾನ್ಸರ್ ಪೆಷೆಂಟ್ ಕೂಡ ಚೀಟಿ ಕಟ್ಟಿದ್ರು. ಅವರ ಹಣವನ್ನು ಕೂಡ ಲಪಟಾಯಿಸಿ ಇದೀಗ ವಂಚಕ ರಾತ್ರೋ ರಾತ್ರಿ ಮನೆ ಖಾಲಿ ಮಾಡಿ ಎಸ್ಕೇಪ್ ಆಗಿದ್ದಾನೆ.
ಆರೋಪಿಯು, ಮನೆ ಲೀಜ್ ಗೆ ಕೊಟ್ಟಿದ್ದ, ಬ್ಯಾಂಕಿನಿಂದ ಲೋನ್ ಕೂಡ ಪಡೆದಿದ್ದ. ಬ್ಯಾಂಕ್ ಗೆ ಲೋನ್ ಕಟ್ಟಿರಲಿಲ್ಲ ಹೀಗಾಗಿ ಪಾಂಡುರಂಗ ಮನೆಗೆ ಬ್ಯಾಂಕ್ ಅಧಿಕಾರಿಗಳು, ಬೀಗ ಹಾಕಿದ್ದಾರೆ. ಲೀಜ್ ಗೆ ಇದ್ದವರನ್ನೂ ಪೊಲೀಸರ ಸಹಾಯದಿಂದ ಬ್ಯಾಂಕ್ ನವರು ಖಾಲಿ ಮಾಡಿಸಿದ್ದಾರೆ. ಬೇಗೂರು ಪೊಲಿಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಾಗಿತ್ತು. ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪಾಂಡುರಂಗನನ್ನು ಅರೆಸ್ಟ್ ಮಾಡಿದ್ದಾರೆ.
ಆರೋಪಿಯು, ಬಡವರಿಗೆ ,ಪೆಷೆಂಟ್ ಗಳಿಗೆ ವಂಚನೆ ಮಾಡಿದ ಹಣ ಕುಟುಂಬಸ್ಥರ ಹೆಸರಿನಲ್ಲಿ ಆಸ್ತಿ ಖರೀದಿ ಸಿದ್ದಾನಂತೆ. ಇವನನ್ನು ಹುಡುಕಿಕೊಂಡು ತಮಿಳು ನಾಡಿಗೆ ಹೋದಾಗ ಅಲ್ಲಿ ಹಲ್ಲೆ ಮಾಡಿದ್ರಂತೆ. ನೊಂದು, ಹಣ ಕಳೆದುಕೊಂಡ ಜನ ನ್ಯಾಯಕ್ಕಾಗಿ ಅಲೆಯುತ್ತಿದ್ದಾರೆ. ಇನ್ನೂ ಕಂಡ ,ಕಂಡವರ ಹಣವನ್ನು ಪಾಂಡುರಂಗ ನುಂಗಿ ನೀರು ಕುಡಿದಿದ್ದಾನೆ. ಕಣ್ಣೀರು ಹಾಕುತ್ತ ನೊಂದ ಜನ ಹಿಡಿ ಶಾಪ ಹಾಕುತ್ತಿದ್ದಾರೆ.