ಹುಬ್ಬಳ್ಳಿ:- ವಿದ್ಯುತ್ ಶಾಟ್ ಸರ್ಕ್ಯೂಟ್ ನಿಂದ ಮನೆಯೊಂದು ಸುಟ್ಟು ಭಸ್ಮ ವಾಗಿರುವ ಘಟನೆ ನಗರದ ಈಶ್ವರನಗರದಲ್ಲಿ ಜರುಗಿದೆ.
ಘಟನೆಯಿಂದ ಮನೆಯಲ್ಲಿದ್ದ ಅಪಾರ ಪ್ರಮಾಣದ ಸಾಮಾಗ್ರಿಗಳು ಸುಟ್ಟ ಕರಕಲಾಗಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ದಳ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎಸ್ ಎಂ ಕೃಷ್ಣ ನಗರದ ನಿವಾಸಿಗಳಿಂದ ಸಹಾಯ ಮಾಡಲಾಗಿದೆ.
ಮನೆ ಸುಟ್ಟು ಹೋದ ಮಾಲೀಕರು ಬಡವರಿದ್ದು ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಶಾಸಕ ಅಬ್ಬಯ್ಯಾ ಪ್ರಸಾದ್, ಸಚಿವ ಸಂತೋಷ ಲಾಡ್ ಅವರಿಗೆ ಸಹಾಯಕ್ಕೆ ಮನವಿ ಮಾಡಿದ್ದಾರೆ.