ಬೆಂಗಳೂರು: ಈ ಕಾಲದಲ್ಲಿ ಯಾರನ್ನ ನಂಬೋದು ಬಿಡೋದು ಅನ್ನೋದೆ ಯಾಚನೆ ಹಾಗಿದೆ. ಕೆಲವೊಂದು ಭಾರಿ ಸಂಭಂಧಿಕರಿಂದಲೂ ನಮಗೆ ಕಂಟಕ ಎದುರಾಗಬಹುದು. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ ನೋಡಿ.. ಕೊಟ್ಟ ಹಣವನ್ನು ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯೋರ್ವ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿರುವ ಘಟನೆ ಜುಲೈ 1 ರ ಸಂಜೆ ನಗರದ ವಿವೇಕನಗರದಲ್ಲಿ ನಡೆದಿದೆ.
#Bengaluru
A man attempted to set a house on fire over an alleged financial dispute. #CCTV footage captured the accused, Subramani, pouring petrol on the main door, window, and footwear stand of the house belonging to Venkataramani and her son Satish, before setting it ablaze. pic.twitter.com/lAVawhyrej— DINESH SHARMA (@medineshsharma) July 4, 2025
ಮನೆಗೆ ಬೆಂಕಿ ಹಚ್ಚಿದವನನ್ನು ಸುಬ್ರಮಣಿ ಎಂದು ಗುರುತಿಸಲಾಗಿದೆ. ವೆಂಕಟರಮಣಿ ಎಂಬುವವರ ಬಳಿ ಸುಬ್ರಮಣಿಯ ಸಹೋದರಿ ಪಾರ್ವತಿ ಎಂಬಾಕೆ ತನ್ನ ಮಗಳ ಮದುವೆಗೆಂದು 5 ಲಕ್ಷ ರೂಪಾಯಿ ಹಣ ಪಡೆದಿದ್ದಳು.
ಮದುವೆಯಾಗಿ ತಿಂಗಳುಗಳೇ ಕಳೆದರೂ ಹಣ ವಾಪಸ್ ನೀಡಿರಲಿಲ್ಲ.. ಇದರಿಂದ ಬೇಸತ್ತ ವೆಂಕಟರಮಣಿ ತಾನೇ ಹೋಗಿ ಕೊಟ್ಟ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಆದರೆ ಈ ವೇಳೆ ಪಾರ್ವತಿ ಹಾಗೂ ಆಕೆಯ ಮಗಳು ರಂಪಾಟ ಮಾಡಿದ್ದರು.
ಇದನ್ನು ಕೇಳಿದ ಆರೋಪಿ ಸುಬ್ರಮಣಿ ಏಕಾಏಕಿ ವೆಂಕಟರಮಣಿಯ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾಗಿದ್ದಾರೆ. ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೆಂಕಟರಮಣಿಯವರ ಪುತ್ರ ಮಾಜಿ ಯೋಧ ಸತೀಶ್ ಕುಮಾರ್ ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಘಟನೆಗೆ ಸಂಬಂಧ ಪಟ್ಟಂತೆ ಸುಬ್ರಮಣಿ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.