ಹುಬ್ಬಳ್ಳಿ:- ಸುಡುವ ಸಾಂಬಾರು ಬಿದ್ದು ಆಸ್ಪತ್ರೆ ಸೇರಿದ್ದ ಮಗು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ಜರುಗಿದೆ.
ಬಾಗಿನ ಅರ್ಪಿಸಲು ಹೋದಾಗ ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಮಹಿಳೆಯ ಶವ ಪತ್ತೆ!
ಹುಬ್ಬಳ್ಳಿ ತಾಲೂಕಿನ ಚನ್ನಾಪುರ ಗ್ರಾಮದ ಎರಡುವರೆ ವರ್ಷದ ರುಕ್ಸಾನಾಬಾನು ಶೇಖಸನದಿ ಮೃತಪಟ್ಟಿದ್ದಾಳೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಬಾಲಕಿಯನ್ನು ಕರೆದುಕೊಂಡು ಬರುವಾಗ ಮಾರ್ಗ ಮಧ್ಯದಲ್ಲಿ ರುಕ್ಸಾನಾಬಾನು ಕೊನೆಯುಸಿರೆಳದಿದ್ದಾಳೆ.
ಮೈಮೆಲೆ ಅನೇಕ ಕಡೆ ಸುಟ್ಟ ಗಾಯಗಳಾಗಿದ್ದರಿಂದ ಬಾಲಕಿ ನರಳಾಡಿದ್ದಾಳೆ. ಆದರೆ, ಸ್ವಲ್ಪ ಗುಣಮುಖರಾಗಿದ್ದರಿಂದ ಮೊನ್ನೆ ಬಾಲಕಿಯನ್ನು ಡಿಸ್ಜಾರ್ಜ್ ಮಾಡಲಾಗಿತ್ತು. ಆದರೆ, ಶುಕ್ರವಾರ (ಜೂ.20) ಮುಂಜಾನೆ ಮತ್ತೆ ಮೈಮೇಲೆ ಗುಳ್ಳೆಗಳಾಗಿದ್ದರಿಂದ ಬಾಲಕಿಯನ್ನು ಹೆತ್ತವರು ಮತ್ತೆ ಕಿಮ್ಸ್ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಕಿಮ್ಸ್ಗೆ ಕರೆದುಕೊಂಡು ಹೋಗುವಷ್ಟರಲ್ಲಿ ಬಾಲಕಿ ಬಾರದ ಲೋಕಕ್ಕೆ ಹೋಗಿದ್ದಾಳೆ.