ನೆಲಮಂಗಲ: ಯುವತಿ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿ ಬಳಿ ಜರುಗಿದೆ.
ಬೇರೊಬ್ಬನ ಜೊತೆ ಚಕ್ಕಂದ ಆಡಲು ಪತಿ, ಅತ್ತೆ-ಮಾವ, ಮಕ್ಕಳಿಗೆ ವಿಷ ಹಾಕಲು ಯತ್ನಿಸಿದ ಲೇಡಿ!
ದರ್ಶನ್ (24) ಕೊಲೆಯಾದ ಯುವಕ. ವೇಣುಗೋಪಾಲ್ ಕೊಲೆ ಮಾಡಿ ನಾಪತ್ತೆ ಆಗಿದ್ದಾನೆ. ಪಾರ್ಟಿ ಮಾಡಲು ಕರೆದು ಪಾರ್ಟಿ ಮಾಡಿದ ಬಳಿಕ ಮನಸೋಹಿಚ್ಚೆ ಹಿರಿದು ಭೀಕರವಾಗಿ ಕೊಲೆ ಮಾಡಲಾಗಿದೆ. ತಡ ರಾತ್ರಿ 1:30 ಕ್ಕೆ ಈ ಘಟನೆ ಜರುಗಿದೆ. ಮೇಲ್ನೋಟಕ್ಕೆ ಇಬ್ಬರು ಒಂದೆ ಹುಡುಗಿಯನ್ನ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಈ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಘಟನೆ ಸಂಬಂಧ ನೆ. ಗ್ರಾಮಾಂತತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹ ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆ ರವಾನೆ ಮಾಡಲಾಗಿದೆ.